ಶಹಾಬಾದ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಸಚಿವ ಸ್ಥಾನ ನೀಡಬೇಕಂದು ಮಾಜಿ ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್ ಒತ್ತಾಯಿಸಿದ್ದಾರೆ.
ಈಗಾಗಲೇ ಶಾಸಕರಾಗಿ ಮೂರು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ.ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಬಡವರಿಗೆ ಆಹಾರ ಕಿಟ್ಗಳನ್ನು, ಮಾಸ್ಕ್ ಸ್ಯಾನಿಟೈಜರ್ಗಳನ್ನು ವಿತರಣೆ ಮಾಡಿದ್ದಾರೆ. ಅಪಘಾತದಲ್ಲಿ ತೊಂದರೆಗೊಳಗಾದ ಕುಟುಂಬಗಳಿಗೆ ವ್ಯಯಕ್ತಿಕ ಧನ ಸಹಾಯ ಮಾಡಿದ್ದಾರೆ.
ಮತಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ಅರಿತು ಸಾಕಷ್ಟು ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡಿ ಜನಮನ್ನಣೆ ಪಡೆದಿದ್ದಾರೆ.ಸಾಕಷ್ಟು ಬಿಜೆಪಿ ಬೆಂಬಲಿಗರನ್ನು ಹುಟ್ಟು ಹಾಕಿ ಬಿಜೆಪಿ ಪಕ್ಷವನ್ನು ಬಲಿಷ್ಟಗೊಳಿಸಿ ಮತಕ್ಷೇತ್ರದಲ್ಲಿ ಬಿಜೆಪಿಯ ಬಾವುಟ ಹಾರುವಂತೆ ಮಾಡಿ ತೋರಿಸುತ್ತಿದ್ದಾರೆ.
ರಾಜಕೀಯವಾಗಿ ಎಲ್ಲಾ ಅನುಭವ ಪಡೆದಿರುವ ಶಾಸಕ ಮತ್ತಿಮಡು ಅವರನ್ನು ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳ್ಳುತ್ತದೆ.ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬಸವರಾಜ ಮತ್ತಮಡು ಅವರನ್ನು ಮಂತ್ರಿಸ್ಥಾನ ನೀಡಬೇಕೆಂದು ಹುಳಗೋಳಕರ್ ಆಗ್ರಹಿಸಿದ್ದಾರೆ.