ಹಿರಿಯ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್‍ಗೆ ವಕೀಲರ ಸನ್ಮಾನ

0
90

ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನ್ಯಾಯವಾದಿಗಳಲ್ಲಿ ಒಬ್ಬರಾದ ಹಾಗು ಸುಮಾರು 65 ವರ್ಷಗಳಿಂದ ನ್ಯಾಂiÀiವಾದಿಗಳಾಗಿ ಸೇವೆ ಸಲ್ಲಿಸಿದ ಬಸವಲಿಂಗಪ್ಪ ಪಾಅಟೀಲ್ ಅವರಿಗೆ ವಕೀಲರಿಂದ ಸನ್ಮಾನಿಸಿ ಗೌರವಿಸಲಾಯಿತು.

ನಗರದ ನ್ಯಾಯಾಲಯದಲ್ಲಿ ಬಾರ್ ಅಶೋಷಿಯೇಷನ್ ವತಿಯಿಂದ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್ ಅವರ 90ನೇ ಜನುಮ ದಿನದ ಅಂಗವಾಗಿ ಎಲ್ಲಾ ನ್ಯಾಯವಾದಿಗಳು ಸೇರಿ ಸನ್ಮಾನಿಸಿ ಗೌರವಿಸುವ ಮೂಲಕ ಶುಭ ಹಾರೈಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ನಿಂಗಣ್ಣ ಚಿಂಚೋಡಿ ಹಾಗು ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ,ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಅತ್ಯಂತ ಹಿರಿಯ ನ್ಯಾಯವಾದಿಗಳಾಗಿ ಸುಮಾರು ಆರು ದಶಕಗಳ ಕಾಲ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿ,ಅನೇಕ ಯುವ ವಕೀಲರಿಗೆ ಮಾರ್ಗದರ್ಶಿಗಳಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ಬಸವಲಿಂಗಪ್ಪ ಪಾಟೀಲ್ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಜಿ.ಎಸ್.ಪಾಟೀಲ್,ಉದಯಸಿಂಗ್,ಮಹ್ಮದ್ ಹುಸೇನ್,ರಮಾನಂದ ಕವಲಿ,ನಂದನಗೌಡ ಪಾಟೀಲ್,ನಂದಣ್ಣ ಬಾಕ್ಲಿ,ಯಲ್ಲಪ್ಪ ಹುಲಿಕಲ್,ಜಿ.ಆರ್.ಬನ್ನಾಳ,ಜಯಲಲಿತಾ ಪಾಟೀಲ್,ಶ್ರೀದೇವಿ ಪಾಟೀಲ್,ಜ್ಯೋತಿ ಎಲ್.ನಾಯಕ,ಸಂತೋಷ ಕುಮಾರಿ ಇತರರಿದ್ದರು.ಗೋಪಾಲ ವಜ್ಜಲ ನಿರೂಪಿಸಿದರು,ಆದಪ್ಪ ಹೊಸ್ಮನಿ ಸ್ವಾಗತಿಸಿದರು,ಮಂಜುನಾಥ ಹುದ್ದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here