ಕಲಬುರಗಿ: ನಗರದ ನೂತನ ವಿದ್ಯಾಲಯ ಬಾಲಕರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಎಚ್ಎಂ ಹಾಗೂ ಕಿರಿಯ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಭೆಯಲ್ಲಿ ದಕ್ಷಿಣ ಉತ್ತರ ವಲಯದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಖಾಲಿಯಾದ ಉಪಾಧ್ಯಕ್ಷ ಸ್ಥಾನಕ್ಕೆ ದಿನಕರ ಮುಲಗಿ ಖಜಾಂಚಿಯಾಗಿ ಅಂಬರೀಶ್ ಅವರನ್ನು ನೇಮಕ ಮಾಡಲಾಯಿತು. ಕಲಬುರ್ಗಿ ದಕ್ಷಿಣ ವಲಯ ಗುರುಮೂರ್ತಿ ಹಿರೇಮಠ್ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಉಪಾಧ್ಯಕ್ಷ ಪ್ರಭುಲಿಂಗ ಕಾರ್ಯದರ್ಶಿ ವಿಜಯಕುಮಾರ್ ಪಾಟೀಲ್ ಖಜಾಂಚಿ ಪುರಂದರ ಸಹಕಾರ್ಯದರ್ಶಿ ಉತ್ತರ ವಲಯ ಉತ್ತರವನ್ನು ಸಿದ್ದಣ್ಣ ಮುಖ ರಂಬಿ (ಅಧ್ಯಕ್ಷ )ರಾಜು ಹುಂಚಾಜಿ (ಉಪಾಧ್ಯಕ್ಷ) ರಘುಪತಿ ರೆಡ್ಡಿ (ಖಜಾಂಚಿ) ಚಾಂದಸಾಬ್ (ಕಾರ್ಯದರ್ಶಿ )ಗಣಪತಿ ರಾಠೋಡ (ಸಹಕಾರ್ಯದರ್ಶಿ).
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಪ್ರಮುಖರಾದ ಮರಿಯಪ್ಪ ಬಸವಪಟ್ಟಣ ಮಹೇಶ್ ರಾಜಶೇಖರ ಸಲಾರಿ ಇತರರಿದ್ದರು.