ಕಲಬುರಗಿ: ಎಐಎಂಐಎಂ ಪಕ್ಷದ ಭಾವಿ ವಿಧಾನ ಸಭೆಯ ಅಭ್ಯರ್ಥಿ ಇಲಿಯಾಜ್ ಸೇಠ್ ಬಾಗಬಾನ್ ಸಮ್ಮುಖದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಎಐಎಂಐಎಂ ಪಕ್ಷಕ್ಕೆ ಸೇರ್ಪಡೆಯಾದರು.
ಕಲಬುರಗಿ ಉತ್ತರ ಮತ ಯುವ ಅಧ್ಯಕ್ಷರಾಗಿ ಅಜೀಮ್ ಶೇಕ್ ಹಾಗೂ ಶಹಾಬಜಾರ್ ಬ್ಲಾಕ್ ಅಧ್ಯಕ್ಷರಾಗಿ ಮೊದ್ದೀನ್ ಪಟೇಲ್ ಅಣಬಿ ಅವರನ್ನು ಸ್ಥಾನಗಳಿಗೆ ನೇಮಕ ಮಾಡಿ ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು. ಮೊದೀನ್ ಪಟೇಲ್ ಕಲಬುರಗಿ ಕಾಂಗ್ರೆಸ್ ಸಮಿತಿಯ ಜನರಲ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಮೊದ್ದೀನ್ ಪಟೇಲ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಾಕರ್ತರಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಸ್ವಾರ್ಥಕ್ಕಾಗಿ ಕಾರ್ಯಾಕರ್ತರನ್ನು ಬಳಸಿಕೊಂಡು ಸುಳ್ಳು ಆಶ್ವಾಸನೆಗಳು ನೀಡಿ ದೂರ ತಳ್ಳಲಾಗುತ್ತಿರುವುದಕ್ಕೆ ಮನೊಂದು ಪಕ್ಷ ತೊರೆದಿದ್ದೇನೆ. ಮುಂದಿನದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಮಹಾವನಗರ ಪಾಲಿಕೆಯ ಮಾಜಿ ಮಹಾಪೌರ, ಎಐಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್ ಸಿನ್ನಿಫರೋಶ್ ಹಲವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.