ಮಾಡಿಯಾಳ ಗ್ರಾಮದಲ್ಲಿ ನಿರಗುಡಿ ಗೆಲುವಿಗೆ ಭರ್ಜರಿ ಪ್ರಚಾರ

0
37

ಕಲಬುರಗಿ: ನವೆಂಬರ 21 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾಹಿತಿ, ಲೇಖಕ ಬಿ.ಹೆಚ್.ನಿರಗುಡಿ ಅವರ ಗೆಲುವು ಬಯಸಿ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಭರ್ಜರಿ ಪ್ರಚಾರ ಮಾಡಿ ಮತಯಾಚನೆ ಮಾಡಲಾಯಿತು.

ನಂತರ ಸಭೆ ನಡೆಸಿ ಮಾತನಾಡಿದ ಕಲಬುರಗಿ ಉತ್ತರ ವಲಯದ ನಿಕಟಪೂರ್ವ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ನಿರಗುಡಿ ಅವರು ಸಾಹಿತಿಯಾಗಿದ್ದು ಸುಮಾರು 25 ಕೃತಿಗಳನ್ನು ರಚಿಸಿದ್ದಾರೆ.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಸರಳ ಸಜ್ಜನಿಕೆಯ ವ್ಯಕ್ತಿತ್ವ ಇರುವ ನಿರಗುಡಿ ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದಾರೆ.ಈ ಬಾರಿ ಅವರನ್ನು ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ.ಎ.ಎಸ್.ಭದ್ರಶೆಟ್ಟಿ,ಪ್ರಭು ಪಾಟೀಲ್, ಮಂಜುನಾಥ ಸಿರಗಾಪೂರ,ಪ್ರಭಾಕರ,ರಮೆಶ ಕಲಶೆಟ್ಪಿ, ಶರಣಬಸಪ್ಪ, ಬಸವರಾಜ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here