ಕಲಬುರಗಿ: ನಗರದ ಸರದಾರ ವಲ್ಲಭಬಾಯಿ ಪಟೇಲ ವೃತ್ತದಲ್ಲಿ ಭಾರತಿ ಯುವ ಸೈನ ಜಿಲ್ಲಾ ಘಟಕದ ವತಿಯಿಂದ ಅಗಲಿರುವ ಮೂರು ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಯುವ ಸೈನ್ಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ರವಿ ದೇಗಾಂವ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ, ಮಹಿಳಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ, ಜಿಲ್ಲಾ ಉಪಾಧ್ಯಕ್ಷ ರೋಮಿಯೋ, ಆಕಾಶ, ಸಾಗರ ಬಿಲಗುಂದಿ, ನೀಲಾವತಿ, ಜಯಶ್ರೀ, ಬಸಯ್ಯ ದಂಡೋತಿ, ರಾಜೇಂದ್ರ ದೆಗಾವ ಇದ್ದರು.