ಬಾನುಲಿಯಲ್ಲಿ ಡಾ. ಈಶ್ವರ್ ಮಂಟೂರ್ ವಿಶೇಷ ಸಂದರ್ಶನ

0
358

ಕಲಬುರಗಿ: ಆಕಾಶವಾಣಿ ವಿವಿಧಭಾರತಿ ಎಫ್.ಎಂ ಕಲಬುರಗಿಯಲ್ಲಿ ಜುಲೈ 29 ರಂದು ಬೆಳಿಗ್ಗೆ 9 ಗಂಟೆಗೆ ಪ್ರಸಾರವಾಗುವ ’ಸಮ್ಮುಖ’ ಕಾರ್ಯಕ್ರಮದಲ್ಲಿ ಜಮಖಂಡಿ ತಾಲೂಕಿನ ಹುನ್ನೂರ ಮಧುರಖಂಡಿಯ ಬಸವಜ್ಞಾನ ಗುರುಕುಲದ ಖ್ಯಾತ ಚಿಂತಕರು ಪ್ರವಚನಕಾರ ಡಾ. ಈಶ್ವರ ಮಂಟೂರ ಅವರೊಡನೆ ನಡೆಸಿದ ವಿಶೇಷ ಸಂದರ್ಶನ ಪ್ರಸಾರವಾಗಲಿದೆ.

ಕಲಬುರಗಿ ಆಕಾಶವಾಣಿಯಲ್ಲಿ ದಿನಾಂಕ 30 ರಂದು ಬೆಳಿಗ್ಗೆ 8.35 ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ

Contact Your\'s Advertisement; 9902492681

ಆಧ್ಯಾತ್ಮ ಲೋಕದ ಅನುಭವ, ಸಾಮಾಜಿಕ ಚಿಂತನೆಯ ಜನಮುಖಿ ಸೇವೆ, ಪ್ರವಚನ ಸಾಹಿತ್ಯದ ಮಹತ್ವ ಕುರಿತಾಗಿ ಮಂಟೂರ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆಸಕ್ತ ಕೇಳುಗರು ವಿವಿಧ ಭಾರತಿ ಎಫ್ ಎಂ  103.7 ಹಾಗೂ ಎಎಂ 1107 ಕಿಲೋಹರ್ಟ್ಸ್ ತರಂಗಾಂತರಗಳಲ್ಲಿ ಕಾರ್ಯಕ್ರಮ ಆಲಿಸಬಹುದೆಂದು ನಿಲಯದ ಕಾರ‍್ಯಕ್ರಮ ಮುಖ್ಯಸ್ಥರಾದ ಆರ್.ಕೆ. ಗೋವಿಂದರಾಜನ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here