ಮನಗಳ ಮಾರ್ಧನಿ ಕೃತಿ ಲೋಕಾರ್ಪಣೆ

0
17

ಕಲಬುರಗಿ: ಡಿ.ದೇವರಾಜ ಅರಸು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಇಂದಿರಾ ಎಸ್. ಕಪೂರ ಅವರು ರಚಿಸಿದ ಮನಗಳ ಮಾರ್ಧನಿ ಕೃತಿ ಲೋಕಾರ್ಪಣೆ ಸಮಾರಂಭ ನಗರದ ಕೋರ್ಟ ರಸ್ತೆಯ ಜೆಸ್ಕಾಂ ಮುಖ್ಯ ಕಚೇರಿಯ ಕೆಇಬಿ ಇಂಜಿನಿಯರ್ ಅಸೋಶಿಯೇಷನ್ ಸಭಾಂಗಣದಲ್ಲಿಂದು ಜರುಗಿತು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತ ಅವರು ಕೃತಿ ಲೋಕಾರ್ಪಣೆ ಮಾಡಿದರು. ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರು ಕೃತಿ ಮಾತನಾಡಿದರು. ಕುರಿತು ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ, ಗುವಿವಿ ಸೈನ್ಸ್ ಮತ್ತು ಟೆಕ್ನಾಲಾಜಿ ವಿಭಾಗದ ಡೀನ್ ಡಾ.ಕೆ.ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Contact Your\'s Advertisement; 9902492681

ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಿ.ದೇವರಾಜ ಅರಸು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಾಹಿತಿ ಡಾ.ಚಿ.ಸಿ.ನಿಂಗಣ್ಣ, ಸಹಕಾರಿ ಸಂಘಗಳ ಉಪ ನಿಬಂಧಕ ಗುರುಮಿಠಕಲ್ ರವೀಂದ್ರ ಅತಿಥಿಗಳಾಗಿ ಆಗಮಿಸಿದ್ದರು. ಕೃತಿಯ ಲೇಖಕಿ ಇಂದಿರಾ ಎಸ್.ಕಪೂರ, ಸಂಜಯ್ ಕಪೂರ, ಮಡಿವಾಳಪ್ಪನಾಗರಹಳ್ಳಿ ಉಪಸ್ಥಿತರಿದ್ದರು. ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here