ಮನೆ ಮನೆಗೆ ತೆರಳಿ ಯೋಜನೆಗಳ ಬಗ್ಗೆ ಅರಿವು

0
20

ಕಲಬುರಗಿ: ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರ ಎಂಟು ವರ್ಷಗಳ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಹಲವು ಯೋಜನೆಗಳ ಕಿರುಹೊತ್ತಿಗೆಯನ್ನು ಮನೆ ಮನೆಗೆ ಮುಟ್ಟಿಸಿ,ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ನಗರದ ಉತ್ತರ ಮತಕ್ಷೇತ್ರದಲ್ಲಿ ಬರುವ ಗುಬ್ಬಿ ಕಾಲೋನಿಯಲ್ಲಿ ಬಿಜೆಪಿ ಯುವ ಮುಖಂಡ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಮೋದಿ ಸರ್ಕಾರದ ೮ ವರ್ಷಗಳ ಸಾಧನೆಯ ಬಗ್ಗೆ ತಿಳಿ ಹೇಳಲಾಯಿತು.

Contact Your\'s Advertisement; 9902492681

ಕಳೆದ ೮ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥ ನಾಯಕತ್ವ ಮತ್ತು ದೂರದೃಷ್ಟಿಯ ಆಡಳಿತದಿಂದಾಗಿ ಅಭೂತಪೂರ್ವ ಬೆಳವಣಿಗೆಯನ್ನು ಮಾಡುವುದರ ಮೂಲಕ ದೇಶದ ಜನರಿಗೆ ಹತ್ತು ಹಲವು ಜನಪದ ಯೋಜನೆಗಳನ್ನು ನೀಡಿದ್ದಾರೆ ಎಂದು ಚಂದು ಪಾಟೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಯಂಕಮ್ಮ ಜಗದೇವ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಮುಖಂಡರಾದ ಜಗದೇವ ಗುತ್ತೇದಾರ, ಮಾರುತಿ ಗೋಡಿಯಾಳ, ಸಿದ್ದರಾಜ ಬಿರಾದಾರ, ಮದುಗುಣಕಿ, ಶ್ಯಾಮರಾವ್ ಕುಲಕರ್ಣಿ, ನಾಗೇಂದ್ರ ಬುಕ್ಕಾ, ಕಲ್ಯಾಣಿ ಶೀಲವಂತ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here