ಕರುನಾಡ ವಿಜಯ ಸೇನೆಯಿಂದ ಸಂಗೊಳ್ಳಿ ರಾಯಣ್ಣ ಉತ್ಸವ

0
17

ಸುರಪುರ:ಕರುಣಾಡ ವಿಜಯ ಸೇನೆ ಸಂಘಟನೆಯಿಂದ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ವಿಜಯ ಸೇನೆ ಅಧ್ಯಕ್ಷ ದೇವಿಂದ್ರಪ್ಪ ತಾಳಿಕೋಟಿ ಮಾತನಾಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವಿಂದ್ರಪ್ಪ,ಇದೇ ತಿಂಗಳು ೨೯ ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ ನಮ್ಮ ನಾಡಿನ ಹೆಮ್ಮೆಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಉತ್ಸವದ ಮೂಲಕ ಸ್ಮರಿಸಲು ಕರುನಾಡ ವಿಜಯಸೇನೆ ಮುಂದಾಗಿದೆ.ಬೆಳಗಾವಿಯಲ್ಲಿ ಸುಮಾರು ೨೦ ಕೀಲೋ ಮೀಟರ್ ಕಾರುಗಳ ಮೆರವಣಿಗೆ ನಡೆಯಲಿದೆ,ನಂತರ ಗಾಂಧಿ ಭವನದಲ್ಲಿ ಸಂಗೊಳ್ಳಿ ರಾಯಣ್ಣನವರ ಉತ್ಸವ ಜರುಗಲಿದೆ.ಆದ್ದರಿಂದ ಸುರಪುರ ತಾಲೂಕಿನಿಂದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖಂಡ ಯಲ್ಲಪ್ಪ ಕುರಕುಂದಿ ಮಾತನಾಡಿ,ಸಂಗೊಳ್ಳಿ ರಾಯಣ್ಣನವರ ಉತ್ಸವವನ್ನು ಯಾವುದೇ ಜಾತಿ ಧರ್ಮದ ಕಾರ್ಯಕ್ರಮವನ್ನಾಗಿ ನೋಡದೆ ಎಲ್ಲರು,ಎಲ್ಲ ಪಕ್ಷದವರು ಸಂಗೊಳ್ಳಿ ರಾಯಣ್ಣನವರ ಕಾರ್ಯಕ್ರಮದಲ್ಲಿ ಭಾಗವಹಿಸೋಣ,ಈ ಕಾರ್ಯಕ್ರಮಕ್ಕೆ ನಾನು ಎಲ್ಲ ರೀತಿಯ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಭೀಮರಡ್ಡಿ ಬೆಕ್ಕಿನಾಳ,ಶರಣು ಸಾಹುಕಾರ ಶಾಂತಪೂರ,ದೇವಿಂದ್ರಪ್ಪಗೌಡ ಪಾಟೀಲ ದೇವರಗೋನಾಲ,ದೊಡ್ಡಪ್ಪ ಪೂಜಾರ,ಸಿದ್ರಾಮ ಎಲಿಗಾರ,ಹೊನ್ನಪ್ಪ ತಳವಾರ,ವೆಂಕಟೇಶ ಚಟ್ನಳ್ಳಿ ಹಾಗೂ ಮಲ್ಲು ವಿಷ್ಣುಸೇನಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here