ವೀರಗಾಸೆ ಪುರವಂತರಿಗೂ ಸರಕಾರ ಮಾಶಾಸನ ನೀಡಲಿ: ಶರಣು ಬಳಿ

0
20

ಸುರಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಕರಾವಳಿ ಭಾಗದ ದೈವಾರಾಧಕರಿಗೆ ಮಾಶಾಸನ ನೀಡುವ ನಿರ್ಧಾರ ಮಾಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ,ಇಂತಹ ಒಂದು ಮುಖ್ಯವಾದ ನಿರ್ಧಾರ ಮಾಡಿರುವ ಸರಕಾರಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಧನ್ಯವಾದ ಸಲ್ಲಿಸಲಿದೆ.

ಅಲ್ಲದೆ ಕರಾವಳೀ ಭಾಗದ ದೈವಾರಾಧಕರಂತೆ ನಾಡಿನಲ್ಲಿ ಶ್ರೀ ವೀರಭದ್ರ ದೇವರ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ ವೀರಗಾಸೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿನ ಪುರವಂತರಿಗೂ ಕೂಡ ಸರಕಾರ ಮಾಶಾಸನ ನೀಡಬೇಕೆಂದು ವಿನಂತಿಸುತ್ತೇವೆ.ಶ್ರೀ ವೀರಭದ್ರ ದೇವರು ಕೂಡ ಈ ನಾಡಿನ ಮೂಲಪುರುಷ ಎಂದು ಖ್ಯಾತ ಸಂಶೋಧಕರಾದ ಡಾ:ಜ.ಚ.ನಿ ಯವರು ತಿಳಿಸಿದ್ದು,ಅಂತಹ ಕನ್ನಡದ ಮೂಲ ಪುರುಷ ಶ್ರೀ ವೀರಭದ್ರ ದೇವರ ಸೇವಕರಾಗಿರುವ ವೀರಗಾಸೆ ಕಲಾವಿದರು ಮತ್ತು ಪುರವಂತರಿಗೂ ಸರಕಾರ ಮಾಶಾಸನ ಘೋಷಿಸಬೇಕೆಂದು ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಶರಣು ಬಳಿ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here