ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ಗೆ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

0
36

ಸುರಪುರ: ಈ ದೇಶ ಕಂಡ ಧೀಮಂತ ನಾಯಕಿ ಹಾಗು ವಿದೇಶಾಂಗ ಸಚಿವೆಯಾಗಿ ಹಲವಾರು ಮಹತ್ವಪೂರ್ಣ ಯೋಜನೆಗಳ ಜಾರಿಗೊಳಿಸಿದ ದಿಟ್ಟ ರಾಜಕಾರಣಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ನಿಧನ ಈ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಮಾತನಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ನಡೆಸಿದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಸುಷ್ಮಾಜಿಯವರ ಅಗಲಿಕೆಯಿಂದ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.ಅವರು ಇನ್ನೂ ಹಲವಾರು ಕಾಲ ಪಕ್ಷದ ಬೆಳೆವಣಿಗೆಗೆ ಸೇವೆಯ ಅವಶ್ಯಕತೆಯಿತ್ತು.ಅವರು ಈ ದೇಶದ ಎಲ್ಲಾ ಮಹಿಳಾ ರಾಜಕಾರಣಿಗಳಿಗೆ ಮಾದರಿಯಾಗಿದ್ದರು.ಅವರ ಅಗಲಿಕೆಯಿಂದ ದೇಶ ಒಬ್ಬ ಮಹಾನ್ ಚೇತನರನ್ನು ಕಳೆದುಕೊಂಡಂತಾಗಿದೆ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಪ್ರಾರ್ಥಿಸಿದರು.

Contact Your\'s Advertisement; 9902492681

ಸಭೆಯಲ್ಲಿ ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ,ನರಸಿಂಹಕಾಂತ ಪಂಚಮಗಿರಿ,ಶಿವಕುಮಾರ ಕಟ್ಟಿಮನಿ, ಮೌಲಾನಸಾಬ್ ಹಾಗು ಮುಖಂಡರಾದ ಶರಣು ನಾಯಕ ಬೈರಿಮರಡಿ,ಸಣ್ಣ ದೇಸಾಯಿ ದೇವರಗೋನಾಲ, ಭೀಮಾಶಂಕರ ಬಿಲ್ಲವ,ರವಿಕುಮಾರ ನಾಯಕ ಬೈರಿಮರಡಿ,ಶರಣು ನಾಯಕ,ದೇವು ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here