ಕಾಳಗಿ: ತಾಲೂಕಿನ ರಟಕಲ್ ಗ್ರಾಮದ,ಶ್ರೀ ಮುರುಗೇಂದ್ರ ಶಿವಯೋಗಿಗಳ 59ನೇ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ವಿರಕ್ತ ಮಠದ ಪರಮ ಪೂಜ್ಯರಾದ ಶ್ರೀ ಸಿದ್ದರಾಮ ಶ್ರೀಗಳಿಗೆ ಹಿಂದೂ ಜಾಗೃತಿ ಸೇನೆ ತಾಲೂಕು ಘಟಕ ಕಾಳಗಿ ವತಿಯಿಂದ, ಸತತ ಐದು ಬಾರಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನವನ್ನು ಮಾಡಿದ ಸಿದ್ದರಾಮ ಶ್ರೀಗಳಿಗೆ ಭರತನೂರಿನ ಚಿಕ್ಕ ಗುರುನಂಜೇಶ್ವರ ಶ್ರೀಗಳ ಸಮ್ಮುಖದಲ್ಲಿ ಹವಾ ಮಲ್ಲಿನಾಥ ಮಹಾರಾಜರ ಉಪಸ್ಥಿತಿಯಲ್ಲಿ ಅನುಷ್ಠಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜಾಗೃತಿ ಸೇನೆ ಕಾಳಗಿ ತಾಲೂಕು ಅಧ್ಯಕ್ಷ ಶಂಕರ ಚೋಕಾ, ಬಲರಾಮ ವಲ್ಯಾಪೂರೆ, ಸುನೀಲ್ ರಾಜಾಪುರ ಕಾಳಗಿ,ಗೌರಿಶಂಕರ ಕಿಣ್ಣಿ, ಬಸವರಾಜ ತಳವಾರ,ಶೇಖರ್ ಕಂಠಿ, ಶಂಕರ ಕಿಣ್ಣಿ,ಮುರುಗೆಪ್ಪ ಹಂದ್ರೊಳ್ಳಿ , ಗೌರಿಶಂಕರ ಟೆಂಗಿನಮಠ, ಬಾಬು ಮಹೆಂದ್ರಕರ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.