ಕಲಬುರಗಿ: ರಂಗಾಯಣ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನದ ಕಲಬುರಗಿ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ನಲ್ಲಿ ಕಲಬುರಗಿ ಜಿಲ್ಲೆಯ ಖ್ಯಾತ ಯುವ ಪತ್ರಕರ್ತ ಹಾಗೂ ಆನ್ ಸ್ಪಾಟ್ ನ್ಯೂಸ್ ಸಂಪಾದಕ ಅಕ್ರಂಪಾಶಾ ಮೋಮಿನ್ ಅವರಿಗೆ ಪ್ರಶಸ್ತಿ ಪತ್ರ ಮತ್ತು ಮೊಮೆಂಟೊ ನೀಡಿ ಸತ್ಕರಿಸಲಾಯಿತು.
ರೆಬೆಲ್ ಸ್ಟಾರ್ ಅಂಬರೀಶ್ ಅಳಿಯ ನಟ ಅಭಿಷೇಕ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಪತ್ರಕರ್ತ,ಲೇಖಕ ಮಹಿಪಾಲರೆಡ್ಡಿ ಮುನ್ನೂರ್, ಅವಿನಾಶ ಹೊಯ್ಸಳ, ಕವಿತಾ, ಸುಮ ಬೆಂಗಳೂರು, ಗುರುಶಿಷ್ಯರು ಸಿನಿ ನಿರ್ದೇಶಕ ಜಡೇಶಕುಮಾರ ಹಂಪಿ , ಸುಧಾಕರಶೆಟ್ಟಿ, ಮನೋಮಯ ಸ್ಟುಡಿಯೋಸ್ ನ ವೈಭವ ಕೇಸ್ಕರ್, ರಮೇಶ , ಗಣೇಶ್, ಸಿನಿ ಲೇಖಕ ರಾಮಕೃಷ್ಣ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.