ಶಹಾಬಾದ: ತಾಲೂಕಿನ ಮರತೂರ ಗ್ರಾಮದಲ್ಲಿ ಎಪ್ರಿಲ್ 5 ಮತ್ತು 6 ರಂದು ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.
ಎಪ್ರಿಲ್ 5 ರಂದು ಬೆಳಿಗ್ಗೆ ಶ್ರೀ ಮೌನೇಶ್ವರರಿಗೆ ಮಹಾಭಿಷೇಕ, ಸಾಯಂಕಾಲ 6 ಗಂಟೆಗೆ ಪಲ್ಲಕ್ಕಿ ಉತ್ಸವವು ಪುರವಂತರ ಸೇವೆ, ಭಜನೆ ಹಾಗೂ ಓಲಗದೊಂದಿಗೆ ಅರ್ಚಕರಾದ ಗುಂಡಪ್ಪ ಕುಂಬಾರ ಇವರ ಮನೆಯಿಂದ ಮೆರವಣಿಗೆಯೊಂದಿಗೆ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪುವುದು.ನಂತರ ಮಹಾಪ್ರಸಾದ ನಡೆಯಲಿದೆ. ರಾತ್ರಿ ವಿವಿಧ ಗವಾಯಿಗಳಿಂದ ಸಂಗೀತ ಸೇವೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿವೆ.
ಎಪ್ರಿಲ್ 6 ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗು ಜರುಗಿದ ನಂತರ ಸಾಯಂಕಾಲ 6 ಗಂಟೆಗೆ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಅರ್ಚಕರ ಮನೆಯಲ್ಲಿ ಗವಿ ಪ್ರವೇಶದೊಂದಿಗೆ ಸಂಪನ್ನಗೊಳ್ಳುವುದು ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.