ಸುರಪುರ ಕೊಡೇಕಲ್ ಗಲಾಟೆ; 19 ಜನರನ್ನು ಬಂಧಿಸಲಾಗಿದೆ | IPS ಅನುಪಮ ಅಗರವಾಲ್

0
17

ಸುರಪುರ : ಕಳೆದ ಎರಡು ದಿನಗಳ ಹಿಂದೆ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಗಲಾಟೆಗೆ ಸಂಬಂಧಿಸಿಂತೆ ಕ್ಷೇತ್ರಕ್ಕೆ ಈಶಾನ್ಯ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಅನುಪಮ ಅಗರವಾಲ್ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು.

ನಂತರ ನಗರದ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗುರುವಾರ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು ಶುಕ್ರವಾರದವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು, ಈ ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದು 10 ವಾಹನಗಳು ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಎರಡು ಗುಂಪುಗಳು ಪರಸ್ಪರ ದೂರು ಕೊಟ್ಟಿರುತ್ತಾರೆ. ಈ ಪ್ರಕರಣದಲ್ಲಿ 118 ಜನರ ಮೇಲೆ ಕೇಸ್ ದಾಖಲಾಗಿದೆ. ವಿಡಿಯೋ ಆಧಾರವಾಗಿಟ್ಟುಕೊಂಡು ಗಲಭೆಯಲ್ಲಿ ಯಾರು ಶಾಮೀಲಾಗಿದ್ದಾರೆ ಎಂದು ಪರಿಶೀಲಿಸಿ ಸಾಕ್ಷಿ ಆಧಾರದ ಮೇಲೆ ಬಂಧಿಸುವ ಪ್ರಕ್ರಿಯೆ ಮುಂದುವರೆದಿದೆ. ಕ್ಷೇತ್ರದಲ್ಲಿ ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕ್ಷೇತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಸುರಪುರದಲ್ಲಿ ಒಂದು ಹುಣಸಗಿಯಲ್ಲಿ ಅರ್ಧ ಪ್ಯಾರಾ ಮಿಲಟರಿ ತುಕಡಿ ನಿಯೋಜಿಸಲಾಗಿದೆ. ಕೊಡೇಕಲ್ ಮತ್ತು ಸುರಪುರದಲ್ಲಿ ಒರ್ವ ಡಿವೈಎಸ್‍ಪಿ ಹಾಕಲಾಗಿದೆ. ಹೊರಗಿನ ಅಧಿಕಾರಿಗಳನ್ನು ಕರೆಯಿಸಿಕೊಳ್ಳಲಾಗಿದೆ. 3-ಕೆಎಸ್‍ಆರ್‍ಪಿ, 1- ಡಿಆರ್ ತುಕಡಿಗಳನ್ನು ತರಿಸಿಕೊಳ್ಳಲಾಗಿದೆ. ಕೊಡೇಕಲ್ , ಹುಣಸಗಿ ಭಾಗದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾರು ಗುಂಪು ಸೇರದಂತೆ ತಿಳಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಶನಿವಾರದವರೆಗೂ ನಿಷೇಧಾಜ್ಞೆ 144 ಕಲಂ ಜಾರಿಗೊಳಿಸಲಾಗಿದೆ. ಸುರಪುರದಂತೆ ಶುಕ್ರವಾರ ಹುಣಸಗಿ ಮತ್ತು ಕೊಡೇಕಲ್‍ನಲ್ಲಿ ಪಥ ಸಂಚಲನ ಮಾಡಲಾಗುವುದು. ಸಾರ್ವಜನಿಕರು ಶಾಂತಿ ಕಾಪಾಡಿಕೊಳ್ಳಬೇಕು ಎಂದರು. ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್‍ಪಿ ಶಿವನಗೌಡ ಪಾಟೀಲ್, ಪಿಐ ಆನಂದ ವಾಗ್ಮೋಡೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here