- ಡಾ.ಅಶೋಕ ದೊಡ್ಮನಿ ಜೇವರ್ಗಿ
ಜೇವರ್ಗಿ: ಬಿಜೆಪಿ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಪಕ್ಷದ ವಿರುದ್ಧ ಮಂಗಳವಾರ ರಾತ್ರಿಯೇ ಭಂಡಾಯದ ಭಾವುಟ ಹಾರಿಸಿದ್ದಾರೆ. ಮಂಗಳವಾರ ಬೆಂಬಲಿಗರ ಸಭೆ ಕರೆದು ಚರ್ಚಿಸಲಿದ್ದಾರೆ.
ಬಿಜೆಪಿಯ ಜೊತೆಗೆ ಇದ್ದ ತಾಲ್ಲೂಕಿನ ನಾಯಕರು ಮಾಜಿ ಶಾಸಕರ ಜೊತೆ ಹೆಜ್ಜೆ ಹಾಕಲಿದ್ದಾರೆಯೇ ಅಥವಾ ಇಲ್ಲವೆ ಎನ್ನುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಬುಧುವಾರ ಪಟ್ಟಣದ ಬೂತಪುರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.30ಕ್ಕೆ ಕರೆದ ಸಭೆಗೆ ತಾಲ್ಲೂಕಿನ ಪ್ರತಿ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕೆಂದು ಸ್ವತಹ ದೊಡ್ಡಪ್ಪಗೌಡ ಪಾಟೀಲ ಅವರೇ ಕರೆ ನೀಡಿದ್ದಾರೆ.
ಪ್ರಮುಖವಾಗಿ ರಮೇಶ ಬಾಬು ವಕೀಲˌ ಕುರಿ ಮತ್ತು ಉಣ್ಣಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಮನಿˌ ಜಿಪಂ ಮಾಜಿ ಸದಸ್ಯೆ ಶೋಭಾ ಭಾಣಿ, ಮಲಿನಾಥಗೌಡ ಪಾಟೀಲ ಯಲಗೋಡˌ ಭೀಮರಾವ ಗುಜಗುಂಡˌ ರೇವಣಸಿದ್ದಪ್ಪ ಸಂಕಾಲಿˌ ದಂಡಪ್ಪ ಸಾಹು ಕುರಳಗೇರಿˌ ಮರೆಪ್ಪ ಬಡಿಗೇರˌ ಸಿದ್ದಣ್ಣ ಹೂಗಾರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಯಾರ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುವುದು ಸದ್ಯದ ಕುತೂಹಲವಾಗಿದೆ.