ಸುರಪುರ: ನಗರದ ಕುಂಬಾರಪೇಟೆಯ ಕುರಬರಗಲ್ಲಿಯ ಅನೇಕ ಜನ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ರಾಜುಗೌಡ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಲ್ಲರಿಗೂ ಪಕ್ಷದ ಶಾಲು ಹಾಕಿ ಬರಮಾಡಿಕೊಂಡ ಶಾಸಕ ರಾಜುಗೌಡ ಮಾತನಾಡಿ,ತಾವೆಲ್ಲರು ಕ್ಷೇತ್ರದಲ್ಲಿನ ಅಭಿವೃಧ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಮತ್ತಷ್ಟು ಶಕ್ತಿ ಹೆಚ್ಚಿಸಿದೆ.ತಾವೆಲ್ಲರು ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಸಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತ ಪ್ರಧಾನಿ,ನಾಗರಾಜ ಗುರಿಕಾರ,ನಿಂಗಪ್ಪ ಕೊಂಗಂಡಿ,ಮಾಳಪ್ಪ ಪ್ರಧಾನಿ,ಮಲ್ಲಪ್ಪ ಕಕ್ಕಸಗೇರಿ,ಅಯ್ಯಪ್ಪ ಹೊಸಕೇರ,ಭೀಮಣ್ಣ ಕಕ್ಕಸಗೇರಿ,ಶಿವಲಿಂಗಪ್ಪ ಕೊಂಗಂಡಿ,ನಿಂಗಪ್ಪ ಪ್ರಧಾನಿ,ಮಾಳಪ್ಪ ಪ್ರಧಾನಿ,ದ್ಯಾವಪ್ಪ ಗೌಡರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಜನ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ ತಾತಾ,ವೇಣುಮಾಧವ ನಾಯಕ, ಬಲಭೀಮನಾಯಕ ಬೈರಿಮಡ್ಡಿ,ರಾಜಾ ರಂಗಪ್ಪ ನಾಯಕ,ನರಸಿಂಹಕಾಂತ ಪಂಚಮಗಿರಿ,ಶ್ರೀನಿವಾಸ ನಾಯಕ ದರಬಾರಿ, ಭೀಮಾಶಂಕರ ಬಿಲ್ಲವ್,ಶ್ರವಣಕುಮಾರ ನಾಯಕ,ವಿಷ್ಣು ಗುತ್ತೇದಾರ,ಪಾರಪ್ಪ ಗುತ್ತೇದಾರ,ರಮೇಶ ಗುತ್ತೇದಾರ,ಅಂಬ್ರೇಶ ನಾಯಕ,ಸಂಗನಗೌಡ,ಜಯರಾಮ ನಾಯಕ,ವೆಂಕಟೇಶ ಚಟ್ನಳ್ಳಿ,ನಿಂಗಪ್ಪ ಐಕೂರ ಸೇರಿದಂತೆ ಅನೇಕರಿದ್ದರು.