ಮತದಾರರ ಮನೆಮನೆಗೆ ತೆರಳಿ ಬಿಜೆಪಿ ಮತಯಾಚನೆ

0
8

ಶಹಾಬಾದ: ನಗರದ ಜಿಇ ಕಾಲೋನಿಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಪರವಾಗಿ ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ್, ಅನೀಲ ಬೋರಗಾಂವಕರ್ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.

ನಂತರ ಮಾತನಾಡಿದ ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ್, ಮತ್ತಿಮಡು ಅವರು ಐದು ವರ್ಷ ಅವಧಿಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲುವು ಶತಸಿದ್ಧ. ಜನರು ಕೇಂದ್ರದ ಮೋದಿ ಸರ್ಕಾರ ,ಯಡಿಯೂರಪ್ಪನವರ ಹಾಗೂ ಬೊಮ್ಮಾಯಿ ಸರ್ಕಾರ ಮಾಡಿದ ಅಭಿವೃದ್ಧಿ ನೋಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತ್ತೊಮ್ಮೆ ಬಸವರಾಜ ಮತ್ತಿಮೂಡ ಅವರನ್ನು ಗೆಲ್ಲಿಸುವದರ ಮೂಲಕ ಜನಪರವಾದ ಕಾರ್ಯ ಮಾಡಲು ತಾವು ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಮತದಾರರಲ್ಲಿ ಕರಪತ್ರ ಹಂಚುವುದರ ಮೂಲಕ ಮನವಿ ಮಾಡಿದರು.

Contact Your\'s Advertisement; 9902492681

ಮುಖಂಡ ಅನೀಲ ಬೋರಗಾಂವಕರ್ ಮಾತನಾಡಿ,ಜನಪರವಾದ ಆಡಳಿತವನ್ನು ಕೊಟ್ಟ ಬಿಜೆಪಿಗೆ ಮತ್ತೇ ಸರಕಾರ ರಚಿಸಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರಮುಖರಾದ ರಾಜು ಮಾನೆ, ಪರಮಾನಂದ ಯಲಗೋಡಕರ್, ಶಾಂತಪ್ಪ ಬಸಪಟ್ಟಣ, ಕಾಶಿನಾಥ ಬಾಸ್ಮೆ, ಅಣ್ಣಾರಾವ ಹಳ್ಳಿ, ಸಿದ್ದು ಹರವಾಳ, ಶಿವಾನಂದ ಮರತೂರ, ಗುರಲಿಂಗಪ್ಪ ಪಾಟೀಲ, ಅನೀಲ ರಾಠೋಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here