ಕಲಬುರಗಿ: ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ್ ಅವರು ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಆರಿಸಿ 2023ರ ಶಾಸಕರಾಗಬೇಕೆಂದು ಅಖಿಲ ಭಾರತ ಬ್ರಾಹ್ಮಣ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ವಿನೋದ್ ಪಾಟೀಲ ಅವರು ವಾರ್ಡ್ ನಂ. 52.ರಲ್ಲಿ ಬರುವ ವೀರಭದ್ರೇಶ್ವರ ದೇವಸ್ಥಾನ ದಿಂದ ಮಾಣಿಕ್ಪ್ರಭು, ಹನುಮಾನ್ ದೇವಸ್ಥಾನ, ಜಯತೀರ್ಥ ನಗರದ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ನವಲದಿ ಲೇವಟ್ ಹನುಮಾನ್ ಟೆಂಪಲ್ ವರಗೆ ಎಲ್ಲಾ ದೇವಸ್ಥಾನಗಳಿಗೆ ಶಾಷ್ಟಾಂಗ ದೀರ್ಘದಂಡ ನಮಸ್ಕಾರ ಹಾಕಿದರು.
ಮುಖಂಡರಾದ ಧರ್ಮರಾಜ ಹೇರೂರ, ಕೃಷ್ಣ, ನಾಗರಾಜ, ಸಂಜೀವ, ಸಾಗರ, ವಿನೋದ, ಶರಣು, ಗುಂಡು, ಪ್ರವೀಣ, ಗುರುರಾಜ ಸೇರಿದಂತೆ ಬಡಾವಣೆಯ ಯುವಕರು ಇದ್ದರು.