ಕಾಳಗಿ: ರಟಕಲ್ ಗ್ರಾಮದಲ್ಲಿ ಅನಿರ್ಧಿಷ್ಟವಧಿ ಧರಣಿ ಸತ್ಯಾಗ್ರಹ 23ಕ್ಕೆ

0
66

ಕಲಬುರಗಿ: ಇಲ್ಲಿನ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ದರ್ಗಾ ಪ್ರವೇಶ ದಾರಿಯ ಮೇಲೆ ಪೊಲೀಸರು ಕಟ್ಟಿರುವ ಕಂಪೌಂಡ ತೆರವಿಗೆ ಒತ್ತಾಯಿಸಿ ಮೇ. 23 ರಿಂದ ಗ್ರಾಮ ಪಂಚಾಯತಿ ಆವರಣದಲ್ಲಿ ಅನಿರ್ಧಿಷ್ಟವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಸೌಹಾರ್ದ ಸಮಿತಿ ತಿಳಿಸಿದೆ.

ರಟಕಲ್ ಪೊಲೀಸ್ ಠಾಣೆಯ ಆವರಣದಲ್ಲಿನ ಐತಿಹಾಸಿಕ ಮಹೇಬೂಬ್ ಸುಬಹಾನಿ ದರ್ಗಾದಕ್ಕೆ ನೂರಾರು ಜನರು ಬರುವ ಪ್ರವೇಶ ದ್ವಾರದ ಮೇಲೆ ಪೊಲೀಸರು ಕಂಪೌಂಡ ಕಟ್ಟುವ ಮೂಲಕ ಗ್ರಾಮದಲ್ಲಿ ವಿವಾದ ಸೃಷ್ಟಿಸಿ ಸಾರ್ವಜನಿಕರಿಗೆ ತೊಂದರೆ ಯಾಗುವಂತೆ ನಡೆದುಕೊಳ್ಳುವ ಮೂಲಕ ಧರ್ಮಿಕ ಹಕ್ಕುಗಳ ಉಲ್ಲಂಘನೆ ಹಾಗೂ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಗ್ರಾಮಸ್ಥರು ದುರಿದ್ದಾರೆ.

Contact Your\'s Advertisement; 9902492681

ತಕ್ಷಣ ದರ್ಗಾದ ಪ್ರವೇಶ ದ್ವಾರದ ಮೇಲೆ ಕಟ್ಟಿರುವ ಕಂಪೌಂಡ ತೆರವಿಗೆ ಮತ್ತು ಗ್ರಾಮದಲ್ಲಿರುವ ಸೌಹಾರ್ದ ವಾತಾವರಣ ಉಳಿಸುವ ಹಿನ್ನೆಲೆಯಲ್ಲಿ ಮೇ. 23 ರಿಂದ ಸರ್ವ ಧರ್ಮೀಯರಿಂದ ಅನಿರ್ಧಿಷ್ಟ ಅವಧಿ ಧರಣಿ ಸತ್ಯಗ್ರಹ ನಡೆಸಲಾಗುತ್ತಿದೆ ಎಂದು ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here