ರಾಜಾ ವೆಂಕಟಪ್ಪ ನಾಯಕರಿಗೆ ಸಚಿವ ಸ್ಥಾನ ನೀಡಬೇಕು

0
8

ಸುರಪುರ: ರಾಜಾ ವೆಂಕಟಪ್ಪ ನಾಯಕ ಅವರು ಮೂರು ಜಿಲ್ಲೆಗಳಲ್ಲಿಯ ಏಕೈಕ ಎಸ್.ಟಿ ಸಮುದಾಯದ ಶಾಸಕರಾಗಿದ್ದಾರೆ ಅಲ್ಲದೆ ಅವರೊಬ್ಬ ಪಕ್ಷ ನಿಷ್ಠರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ನಗರದ ರಂಗಂಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಅನೇಕ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ರಾಜಾ ವೆಂಕಟಪ್ಪ ನಾಯಕರು ಒಬ್ಬ ಹಿರಿಯ ಶಾಸಕರಾಗಿದ್ದಾರೆ,ಅವರು ತಮ್ಮ ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ನಾಲ್ಕು ಬಾರಿ ಶಾಸಕರಾಗಿದ್ದಾರೆ,ಪಕ್ಷಕ್ಕಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿದ್ದಾರೆ.ಇಂತಹ ಹಿರಿಯ ಶಾಸಕರಿಗೆ ಕಾಂಗ್ರೆಸ್ ಪಕ್ಷ ಈಬಾರಿ ಸಚಿವ ಸ್ಥಾನ ನೀಡಬೇಕು ಎಂದರು.

Contact Your\'s Advertisement; 9902492681

ಅಲ್ಲದೆ ಪ್ರತಿ ಮನೆಗಳಿಗೂ ಭೇಟಿ ನೀಡಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಭರವಸೆಗಳ ತಿಳಿಸುವ ಮೂಲಕ ಹೆಚ್ಚಿನ ಮತಗಳು ಬರಲು ಕಾರ್ಯನಿರ್ವಹಿಸಿದ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುವರ್ಣ ಸಿದ್ರಾಮ ಎಲಿಗಾರ ಅವರಿಗೂ ಧರ್ನವಾದ ಅರ್ಪಿಸುವುದಾಗಿ ತಿಳಿಸಿದರು.

ಇನ್ನು ಈಬಾರಿಯ ಚುನಾವಣೆಯಲ್ಲಿ ರಂಗಂಪೇಟೆಯ ಎಲ್ಲಾ 17 ವಾರ್ಡ್‍ಗಳ ಜನರು ಎಲ್ಲಾ ಸಮುದಾಯದ ಜನರು ಕೂಡ ರಾಜಾ ವೆಂಕಟಪ್ಪ ನಾಯಕ ಅವರಿಗೆ ಮತ ನೀಡಿ ಗೆಲ್ಲಿಸಿದ್ದಾರೆ.ಅದಕ್ಕಾಗಿ ಎಲ್ಲಾ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ ಗಫೂರ್ ನಗನೂರಿ,ನಗರಸಭೆ ಸದಸ್ಯ ನಾಸೀರ ಕುಂಡಾಲೆ,ಕಮ್ರುದ್ದಿನ್ ನಾರಾಯಣಪೇಟ, ಶೇಖ ಮಹಿಬೂಬ ಒಂಟಿ,ಅಬ್ದುಲ್ ಅಲೀಂ ಗೋಗಿ, ಜಹೀರ್, ಮಲ್ಲು ಬಿಲ್ಲವ್,ಖಾಲಿದ್ ಅಹ್ಮದ್ ತಾಳಿಕೋಟಿ,ಧರ್ಮು ಮಡಿವಾಳ,ಸಿದ್ರಾಮ ಎಲಿಗಾರ,ಶೀವಾನಂದ ತೋಟದ್,ಸೋಮರಾಯ ಶಖಾಪುರ,ಸುಬ್ಬಣ್ಣ ಸೇಡಂ,ಮಹೇಶ ಗೋಗಿ,ಶಿವಶಂಕರ ಆಲೂರ,ಮುಖಿದ್ ಕುಂಡಾಲೆ,ನಾಗರಾಜ ರುಮಾಲ,ಶರಣು ಅರಕೇರಿ,ಆದಪ್ಪ ಕುಂಬಾರ,ನಾಗಪ್ಪ ಕಟ್ಟಿಮನಿ,ಖಾಸೀಂ ಅಲಿ ಬಳಿಚಕ್ರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here