ಸುರಪುರ:ನಗರದ ಝಂಡದಕೇರ ನಿವಾಸಿಯಾದ ದಿನೇಶಕುಮಾರ ಚಲುವಾದಿ ಎನ್ನುವ ವಿದ್ಯಾರ್ಥಿ ಕೇಂದ್ರ ಸರಕಾರದ ನೀಟ್ ಪರೀಕ್ಷೆಯಲ್ಲಿ 724 ಅಂಕಗಳಿಗೆ 572 ಅಂಕ ಪಡೆದು ಸಾಧನೆ ಮಾಡಿದ್ದಾನೆ.
ವಿದ್ಯಾರ್ಥಿ ದಿನೇಶ ಕುಮಾರ ಅವರ ತಂದೆ ರಾಯಪ್ಪ ಚಲುವಾದಿ ನಗರದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದು, ತಂದೆಯ ಶ್ರಮವನ್ನು ಅರಿತು ಕೊಂಡ ಮಗ ಈಗ ಸಾಧನೆ ಮಾಡಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದೆ.ದಿನೇಶ ಕುಮಾರ ದೇಶದಲ್ಲಿಯ ಎಸ್.ಸಿ ಕೆಟಗೇರಿಯಲ್ಲಿ 1114 ನೇ ರ್ಯಾಂಕ್ ಪಡೆದಿದ್ದು, ದೇಶದ ಒಟ್ಟಾರೆ ರ್ಯಾಂಕ್ಲ್ಲಿ 47087ನೇ ಸ್ಥಾನದಲ್ಲಿದ್ದು ವಿದ್ಯಾರ್ಥಿಯ ಸಾಧನೆಗೆ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ದಿನೇಶಕುಮಾರ ತಂದೆ ರಾಯಪ್ಪ ಸೇವೆ ಸಲ್ಲಿಸುತ್ತಿರುವ ನಗರದ ಡಿಸಿಸಿ ಬ್ಯಾಂಖ್ ಶಾಖೆಯಲ್ಲಿ ವ್ಯವಸ್ಥಾಪಕ ಶಿವಲಿಂಗಪ್ಪ ವೆಂಕಟಗಿರಿ,ಸಿಬ್ಬಂದಿಗಳಾದ ಚನ್ನಾರೆಡ್ಡಿ ಆನೆಸೂಗುರು,ಬಸವರಾಜ ಕುಂಬಾರ,ಸದಾಶಿವ ಮುಧೋಳ, ರಾಜಶೇಖರ, ನಾಗರಾಜ, ದೇವರಾಜ,ಮೌನೇಶ ಕಕ್ಕೇರ,ಮಲ್ಲಿಕಾರ್ಜುನ ಬಾದ್ಯಾಪುರ ಸೇರಿದಂತೆ ಅನೇಕರು ಹರ್ಷವ್ಯಕ್ತಪಡಿಸಿ ತಂದೆ ಮತ್ತು ಸಾಧನೆ ಮಾಡಿದ ಮಗ ದಿನೇಶಕುಮಾರ ಇಬ್ಬರಿಗೂ ಸನ್ಮಾನಿಸಿ ಗೌರವಿಸಿದ್ದಾರೆ.