“ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಆಳಂದದಲ್ಲಿ ಜಾಥಾಕ್ಕೆ ಚಾಲನೆ

0
16

ಕಲಬುರಗಿ; ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಆಳಂದ ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲಕಾರ್ಮಿಕ ವಿರೋಧಿ ದಿನ” ಅಂಗವಾಗಿ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಶಂಕ್ರಪ್ಪ ಅರುಟಗಿ ಅವರು ಆಳಂದ ತಾಲೂಕು ನ್ಯಾಯಾಲಯದ ಆವರಣದಲ್ಲಿ ಬುಧವಾರ ಜಾಥಾಕ್ಕೆ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, “18 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಪಾಲಕರು ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಮಕ್ಕಳನ್ನು ದುಡಿಸಿಕೊಂಡ ಮಾಲೀಕರುಗಳ ವಿರುದ್ಧ ಪ್ರಕರಣಗಳು ದಾಖಲಿಸುವಂತೆ ಸೂಚಿಸಿದರು.

Contact Your\'s Advertisement; 9902492681

ಸಂಸ್ಕಾರ ಪ್ರತಿμÁ್ಠನ ಸಂಸ್ಥೆಯ ನಿರ್ದೇಶಕ. ವಿಠ್ಠಲ್ ಚಿಕಣಿ ಮಾತನಾಡಿ, ಅಂಗಡಿ ಮಾಲೀಕರು “ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದೇ ಶಾಲೆಗೆ ಕಳುಹಿಸಿ ವಿದ್ಯಾರ್ಜನೆಗೆ ಪ್ರೋತ್ಸಾಹಿಸಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳು” ಎಂಬುವುದನ್ನು ನಾವೆಲ್ಲರೂ ಅರಿಯಬೇಕು ಎಂದರು.

ಆಳಂದ ತಾಲೂಕು ನ್ಯಾಯಾಲಯದಿಂದ ಆರಂಭಗೊಂಡ ಜಾಥಾವು ಮುಖ್ಯರಸ್ತೆ ಮೂಲಕ ಶ್ರೀರಾಮ್ ಮಾರ್ಕೆಟ್‍ವರೆಗೆ ಬಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ ಆಟೋ ದ್ವನಿವರ್ಧಕ ಮೂಲಕ ಬಿತ್ತಿ ಪತ್ರಗಳು ಹಂಚುವುದರ ಮೂಲಕ “ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ದುಡಿಸಿಕೊಂಡಲ್ಲಿ ಮಾಲೀಕರುಗಳ ವಿರುದ್ಧ 20,000 ರೂ. ರಿಂದ 50,000 ರೂ. ವರೆಗೂ ದಂಡ ಮತ್ತು 6 ತಿಂಗಳಿಂದ 2 ವರ್ಷಗಳ ವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಆಳಂದ ಕಾರ್ಯಕ್ರಮದ ನ್ಯಾಯವಾದಿಗಳ ಸಂಘ ಅಧ್ಯಕ್ಷರಾದ ಡಿ.ಎಸ್.ನಾಡ್ಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಆಳಂದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಯಲ್ಲಪ್ಪ ಕಲ್ಲಾಪೂರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕುಮಾರಿ. ಸ್ನೇಹ ಪಾಟೀಲ್, ಸಹಾಯಕ ಸರಕಾರಿ ಅಭಿಯೋಜಕ ಶುಭಾಶ್ರೀ ಬಡಿಗೇರ್, ಜ್ಯೋತಿ ವಿ.ಬಂದಿ, ತಹಶೀಲ್ದಾರರಾದ ಪ್ರದೀಪ್ ಕುಮಾರ್ ಹಿರೇಮಠ, ಆಳಂದ/ಕಲಬುರಗಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ರವೀಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋμï ಕುಲಕರ್ಣಿ, ಕಲಬುರಗಿ ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯ ಚೈಲ್ಡ್ ಲೈನ್ ನೂಡಲ್ ಕೇಂದ್ರ ಜಿಲ್ಲಾ ಸಂಯೋಜಕ .ಬಸವರಾಜ್ ತೆಂಗಳಿ ಹಾಗೂ ಕನ್ಯಾ ಪ್ರೌಢ ಶಾಲೆಯ ಶಿಕ್ಷಕ ವಿಜಯ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here