ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ ರಾಜಶ್ರೀ ಜೋಷಿಗೆ ಏಳು ಚಿನ್ನದ ಪದಕ

0
6

ಸುರಪುರ: ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಮೂಲತ ಸುರಪುರದವರಾಗಿರುವ ಹಾಗೂ ಸದ್ಯ ಯಾದಗಿರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರಲ್ಹಾದ ಜೋಷಿ ಬೀರನೂರ ಅವರ ಪುತ್ರಿ ರಾಜಶ್ರೀ ಜೋಷಿ ಅವರು ಸೂಕ್ಷ್ಮಜೀವಿಶಾಸ್ತ್ರ(ಮೈಕ್ರೋಬಯಾಲಜಿ) ವಿಭಾಗದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ರಾಜಶ್ರೀ ಜೋಷಿ ಅವರು ಮೊದನಿಂದಲೂ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದು ಸತತ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುತ್ತಾ ಬಂದಿದ್ದು ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕಗಳು ಒಲಿದು ಬಂದಿದ್ದು ಇವರ ತಂದೆ ಯಾದಗಿರಿಯ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು ಹಾಗೂ ಇವರ ತಾಯಿ ಗೃಹಿಣಿ ಆಗಿದ್ದಾರೆ.

Contact Your\'s Advertisement; 9902492681

ಪ್ರಾಥಮಿಕ ಹಂತದಲ್ಲಿ 5ನೇ ತರಗತಿಯವರೆಗೆ ನಗರದ ಗಾಯತ್ರಿ ಶಾಲೆಯಲ್ಲಿ ಓದಿದ್ದು ನಂತರ ಎಸ್‍ಎಸ್‍ಎಲ್‍ಸಿ ಮಹಾತ್ಮ ಗಾಂಧಿ ಪ್ರೌಢಶಾಲೆ ಹಾಗೂ ಪಿಯುಸಿ ಯಾದಗಿರಿಯ ಆರ್‍ವಿ ಕಾಲೇಜಿನಲ್ಲಿ ಮುಗಿಸಿದ್ದು ಬಿ.ಎಸ್ಸಿ ಪದವಿಯನ್ನು ಬೆಂಗಳೂರನ ಆಚಾರ್ಯ ಕಾಲೇಜ್ ಆಫ್ ಸೈನ್ಸನಲ್ಲಿ ಪೂರೈಸಿದ್ದಾರೆ.

ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂದು (ಸೋಮವಾರ) ನಡೆಯಲಿರುವ 41ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here