ಬಹುಮುಖ ವ್ಯಕ್ತಿತ್ವದ ಡಿವಿಜಿ: ಸತ್ಯಂಪೇಟೆ

0
50

ಡಿವಿಜಿ ಅವರು ರಾಜಕೀಯದ ಬಗ್ಗೆ ಆಗಲೇ ಒಂದು ಮಾತನ್ನು ಹೇಳಿದ್ದರು. ಮುಂದೊಂದು ದಿನ ಈ ರಾಜಕಾರಣ ದೊಡ್ಡ ಉದ್ಯಮವಾಗುತ್ತೆವೆಂದು ಹೇಳಿದ್ದರು. ಅವರ ಆ ಮಾತು ಇಂದು ನಿಜವೆನಿಸುತ್ತಿದೆ. ರಾಜಕಾರಣ ದುಡ್ಡು ಹಾಕಿ ದುಡ್ಡು ತೆಗೆಯುವ ವ್ಯಾಪಾರ ಆಗಿದೆ. ಅದರಂತೆ ಪತ್ರಿಕೋದ್ಯಮವೂ ಉದ್ಯಮವಾಗಿ ಬೆಳೆದಿದೆ. -ಡಾ. ಶಿವರಂಜನ ಸತ್ಯಂಪೇಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ, ಕಲಬುರಗಿ.

ಕಲಬುರಗಿ: ಡಿ.ವಿ.ಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಬಹುಮುಖ ವ್ಯಕ್ತಿತ್ವ ಹೊಂದಿದ್ದರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರರ್ಕರ ಸಂಘದ  ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಅವರು ತಿಳಿಸಿದರು.

Contact Your\'s Advertisement; 9902492681

ನಗರದ ಪತ್ರಿಕಾ ಭವನದಲ್ಲಿ ssಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಡಿವಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ತಕ್ರಮದಲ್ಲಿ ಮಾತನಾಡಿದ ಅವರು, ಪ್ರಮಾಣಿಕ ಮತ್ತು ನ್ಯಾಯ ನಿಷ್ಠುರಿ ಪತ್ರಕರ್ತ ಆಗಿರುವುದರ ಜೊತೆಗೆ ಉತ್ತಮ ಸಾಹಿತಿ, ವಾಗ್ಮಿ ಕೂಡ ಆಗಿದ್ದರು ಎಂದು ತಿಳಿಸಿದರು.

ಡಿವಿಜಿಯವರು ಸರಳ ಸಜ್ಜನಿಕೆ ಸ್ನೇಹ ಜೀವಿ ಪತ್ರಕರ್ತರು ಆಗಿದ್ದರು. ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.

ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ 1932ರಲ್ಲಿ ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸುತ್ತಾರೆ. ಆ ಸಂಘದ ಮೊದಲನೇಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಮಂಕುತಿಮ್ಮನ ಕಗ್ಗ ಬಹಳ ಪ್ರಸಿದ್ಧ ಕೃತಿಯಾಗಿದೆ. ಆದ್ದರಿಂದ ಅವರನ್ನು ಪತ್ರಿಕಾ ದಿನಾಚರಣೆ ದಿನದಂದು ಸ್ಮರಿಸುವುದರ ಜೊತೆಗೆ ಅವರ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

ಈ ಸಂರ್ಭದಲ್ಲಿ ರ್ನಾಟಕ ರಾಜ್ಯ ಪತ್ರರ್ತ ಸಂಘದ ಕಲಬುರಗಿ ಜಿಲ್ಲಾ ಘಟಕದ ಪ್ರಧಾನ ಕರ್ಯರ್ಶಿ ಸಂಗಮನಾಥ ರೇವತಗಾಂವ, ಕರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಚಕ್ರರ್ತಿ, ರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರಾದ ಶರಣಬಸಪ್ಪ ಜಿಡಗೆ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಹಿರಿಯ ಪತ್ರರ್ತ ಸಿದ್ದಣ್ಣ ಮಾಲಗಾರ, ಸೈಯದ್ ಮನ್ಸೂರ್, ಮಹೇಶ ಚೌಕಿಮಠ, ಶಿವಾನಂದ ಮಠಪತಿ, ಪುಂಡಲೀಕ ಮೊಸಲಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here