ಇಂಜಿನಿಯರ್ ಗಳ ಯಾವುದೇ ಸಹಾಯಕ್ಕು ನಾನು ಸಿದ್ದ; ಸಚಿವ ದರ್ಶನಾಪುರ

0
15

ಕಲಬುರಗಿ: ನಾನು ಒಬ್ಬ ಇಂಜಿನಿಯರ್ ಸುಮಾರು ನಾಲ್ಕು ವರ್ಷ ಏತ ನೀರಾವರಿ ಕಾರ್ಪೊರೇಷನ್ ನ ವಿಜಾಪುರದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡಿದ್ದೆ ಈ ಇನ್ಸ್ಟ್ರುಯೇಷನ್ ಆಫ್ ಇಂಜಿನಿಯರ್ಸ್ ಕಲಬುರಗಿ ಘಟಕದ ಸದಸ್ಯನು ಹೌದು ಆದಕಾರಣ ಈ  ಸಂಸ್ಥೆಯ ಮತ್ತು ಇಂಜಿನಿಯರ್ ಗಳ ಯಾವುದೇ ಸಹಾಯಕ್ಕು ನಾನು ಸಿದ್ದ ಎಂದು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಕ್ಯಾಬಿನೆಟ್ ಮಂತ್ರಿ ಮತ್ತು ಯಾದಗಿರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣಬಸಪ್ಪ ದರ್ಶನಾಪುರವರು ನುಡಿದರು.

ಅವರು ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕಲಬುರ್ಗಿ ಘಟಕವು ಏರ್ಪಡಿಸಿದ್ದ ಸನ್ಮಾನ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ಅವರು ಮುಂದುವರೆದು ಮಾತನಾಡುತ್ತಾ ಇಲ್ಲಿ ಸೇರಿದ್ದ ಜನರನ್ನು ನೋಡಿದರೆ ಎಲ್ಲಾ ನನ್ನ ಕಾಲೇಜ್  ಸ್ನೇಹಿತರಿಗೆ ಇದ್ದಾರೆ ಆದ ಕಾರಣ ಎಲ್ಲಾ ಹಳೆಯ ನೆನಪುಗಳು  ಬರುತ್ತಾ ಇವೆ ಎಂದು ಹೇಳುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು

Contact Your\'s Advertisement; 9902492681

ಸಂಸ್ಥೆಯ ಅಧ್ಯಕ್ಷರಾದ ಶ್ರೀಸುಭಾಷ್ ಸುಗೂರ್ ಅವರು ಸ್ವಾಗತಿಸಿದರು ಡಾ ಶ್ರೀಧರ್ ಪಾಂಡೆ ನಿರೂಪಿಸಿದರು ಡಾ. ಪ್ರಶಾಂತ ಕಾಂಬಳೆ ಪ್ರಾರ್ಥಿಸಿದರು ಡಾ. ಬಾಬುರಾವ್ ಸೇರಿಕಾರ್ ಸನ್ಮಾನಿತರನ್ನು ಪರಿಚಯಿಸಿದರು ಸಂಸ್ಥೆಯ ಕಾರ್ಯದರ್ಶಿಗಳಾದ ಹನುಮಯ್ಯ ಬೇಲೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಸುಭಾಷ್ ಸುಗೂರ್ ಕಾರ್ಯದರ್ಶಿಗಳಾದ ಹನುಮಯ್ಯ ಬೇಲೂರ ಜಿ ಆರ್ ಮುತ್ತಗಿ ಎಂಎಮ್ ಕಡದಿ ಕಾಶಪ್ಪವಂಜರಕೇಡ ಹಣಮಂತ ಪ್ರಭು ಸೀತಾರಾಮ್ ಮಣ್ಣೂರ್ ಚಂದ್ರಶೇಖರ್ ಕಕ್ಕೇರಿ,  ಚನ್ನವೀರಯ್ಯ ಸ್ವಾಮಿ , ಶಿವಪುತ್ರಪ್ಪ ಬಾವಿ, ಡಾಕ್ಟರ್ ಪ್ರಶಾಂತ್ ಕಾಂಬಳೆ ಡಾಕ್ಟರ್ ಶ್ರೀಧರ್ ಪಾಂಡೆ ಡಾಕ್ಟರ್ ಬಾಬು ರಾವ್ ಸೇರಿಕಾರ್ ಚಂದ್ರಕಲಾ ತೆಗ್ನೂರ್ ,ಉದಯ ಬಳ್ಳಾರಿ ಅಂಬರೀಶ್ ಗಣಾಚಾರಿ, ದಶರತ್ ಕೊಲ್ಲೂರ್ ಚಂದ್ರಶೇಖರ್ ಬೋಗ್ಲೆ ಶುಕ್ಲಾ ಸರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here