ಕಲಬುರಗಿ: ಐಸಿಎಐ ತೆರಿಗೆ ಸಲಹಾ ಸಮಿತಿ ಮತ್ತು ಚೇಂಬರ್ ಸಹಯೋಗದಲ್ಲಿ ಸಾರ್ವಜನಿಕರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವುದು ಸೇರಿ ಐಟಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಜಾಗೃತಿ ಮೂಡಿಸಲು ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜು.13 ಮತ್ತು 14 ರಂದು ಟ್ಯಾಕ್ಸ್ ಕ್ಲಿನಿಕ್ ಎಂಬ ಕಾರ್ಯಾಗಾರಕ್ಕೆ ಆದಾಯ ತೆರಿಗೆ ಇಲಾಖೆ ವಿಭಾಗ ಜಂಟಿ ಆಯುಕ್ತರಾದ ಬಿ.ಕವಿತಾರಾಣಿ ಉದ್ಘಾಟಿಸಿದರು.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ಆದಾಯ ತೆರಿಗೆ ಸಲಹೆಗಾರ ಸಿಎ ಮಲ್ಲಿಕಾರ್ಜುನ ಮಹಾಂತಗೋಳ, ಪ್ರವೀಣ್ ನಂದಿ, ಮಂಜುನಾಥ್ ಜೇವರ್ಗಿ ಇದ್ದರು.