ಕಲಬುರಗಿ: ನಗರದ ಕೇಂದ್ರ ಬಸ್ಸು ನಿಲ್ದಾಣದ ಎದುರುಗಡೆ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ವಾರ್ಡನಂ.44.ರ ಪಾಲಿಕೆ ಸದಸ್ಯ ಸಚಿನ್ ಶಿರವಾಳ ನೇತೃತ್ವದಲ್ಲಿ ಬಡವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
ಕಾಂಗ್ರೇಸ್ ಮುಖಂಡರಾದ ಶರಣು ಅಲ್ಲಮಪ್ರಭು ಪಾಟೀಲ್, ಅಮರ ಶಿರವಾಳ್, ಅಮೃತ್ ಬಿರಾದಾರ್, ಶರಣು ಬೆಳಕೇರಿ, ಭಾನುಕುಮಾರ್ ಯರಗೋಳ, ಶಿವು, ಝೀಶಾನ್, ಸಮೀರ್, ಶಿವು, ರೋಶನ್, ವಿಘ್ನೇಶ, ಹಾಜಿ, ಮೆಹಬೂಬ್, ರಹಿಂ, ಸಚೀನ್ ಸೇರಿದಂತೆ ಇತರರು ಇದ್ದರು.