ಕೃಷಿ ಪರಿಕರ ಮಾರಾಟಗಾರರಿಗೆ ವ್ಯಕ್ತಿತ್ವ ವಿಕಸನ ತರಬೇತಿ

0
14

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ವ್ಯಕ್ತಿತ್ವ ವಿಕಸÀನ ತರಬೇತಿಯನ್ನುಡಾ. ಎಸ್.ಬಿ. ಗೌಡಪ್ಪ ವಿಸ್ತರಣ ನಿರ್ದೇಶಕರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರುರವರು ಮಾತನಾಡಿ ಮನುಷ್ಯನಲ್ಲಿ ವಿಶ್ವಾಸ, ಜ್ಞಾನ, ಅರಿವು, ಸಮಯ ಪಾಲನೆ, ತಿಳುವಳಿಕೆ, ಪರಿಶ್ರಮ ಇವುಗಳನ್ನು ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡಲ್ಲಿ ಯಶಸ್ವಿನ ಹಾದಿಗಳು ಸುಗಮವಾಗಿ ನಡೆಯುತ್ತದೆ ಎಂದರು.

ಮನಸ್ಸಿನ ಏಕಾಗ್ರತೆ, ಸಮಸ್ಯ ಪರಿಹರಿಸುವ ಮಾಗೋಪಾಯಗಳನ್ನು ದೈನಂದಿನ ಜೀವನದಲ್ಲಿ ನಾವುಗಳು ಹುಡುಕುವ ಸ್ಥಿತಿ ಎದುರಾಗುತ್ತಿದೆ.ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಪ್ರಸ್ತುತಒತ್ತಡದ ಸನ್ನಿವೇಶಗಳನ್ನು  ಗುರುಹಿರಿಯರ, ಮಾರ್ಗದರ್ಶಕರ ಸಹಕಾರ ಸಲಹೆ ಅತ್ಯಗತ್ಯಎಂದರು.

Contact Your\'s Advertisement; 9902492681

ನಂತರ ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ತಾಕುಗಳಿಗೆ ಭೇಟಿ ನೀಡಿ ಕೆವಿಕೆ ವಿಜ್ಞಾನಿಗಳು ಜಿಲ್ಲೆಯಲ್ಲಿ ಬಿತ್ತನೆತಡವಾಗಿದ್ದರೂ ವಿಪರೀತ ಮಳೆಯಿಂದಾಗಿ ಆಗುವ ಕೃಷಿ ಸಮಸ್ಯಗಳಿಗೆ ರೈತರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು ಹಾಗೂ ಪರ್ಯಾಯ ಬೆಳೆ, ತೊಗರಿಆಧಾರಿತ ಕೃಷಿ ಚಟುವಟಿಕೆಗೆ ತಾಂತ್ರಿಕತೆಗಳನ್ನು ರೈತರಿಗೆ ನೀಡಲು ಸಲಹೆ ನೀಡಿದರು.

ಕೆವಿಕೆ ಮುಖ್ಯಸ್ಥರಾದಡಾ.ರಾಜು ಜಿ. ತೆಗ್ಗಳ್ಳಿ, ಡಾ. ವಾಸುದೇವ ನಾಯ್ಕ್, ಡಾ.ಜಹೀರ್‍ಅಹೆಮದ್ ಮತ್ತು ದೇಶಿ ಕಾರ್ಯಕ್ರಮದ ಸಂಚಾಲಕಾರದಡಾ. ಪಾಂಡುರಂಗರಾವರವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here