ಕಲಬುರಗಿ: ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗೆ ಆಗ್ರಹಿಸಿ ಸಿಐಟಿಯು, ಕೆಪಿಆರ್ ಎಸ್, ಎಐಎಡಬ್ಲೂಯು ವತಿಯಿಂದ ಆ. 14ರಂದು ಸಂಜೆಯಿಂದ 15ರ ಬೆಳಗಿನವರೆಗೆ ಆಹೋರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಸಜ್ಜನ್ ತಿಳಿಸಿದರು.
ದೇಶದ ಆರ್ಥಿಕತೆಗೆ, ಏಕತೆ ಮತ್ತು ಸಮಗ್ರತೆಗೆ ಆಳುವ ವರ್ಗದಿಂದ ಅಪಾಯ ಬಂದೊದಗಿದೆ. ಕೃಷಿ, ಕೂಲಿ ಕಾರ್ಮಿಕರು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ, ಕಾರ್ಮಿಕ, ಕೂಲಿಕಾರರು ಪ್ರತಿಜ್ಞಾವಿಧಿ ಸ್ವೀಕರಿಸುವ ಹಾಗೂ ಪ್ರಚಾರಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿರುವ 1 ಕೋಟಿ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಜೀವನ ಭದ್ರತೆ ಇಲ್ಲ. ರಾಜ್ಯದಲ್ಲಿ ಆಹೋರಾತ್ರಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಸಲು ಜನತೆಯ ಹೋರಾಟವನ್ನು ಅಣಿಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೌರಮ್ಮ ಪಾಟೀಲ, ಭೀಮಶೆಟ್ಟಿ ಯಂಪಳ್ಳಿ, ನಾಗಯ್ಯ ಸ್ವಾಮಿ ಇತರರಿದ್ದರು.