ಸುರಪುರ: ತಾಲೂಕಿನ ದೇವಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಗ್ರಾಮ ಶಾಖೆ ಉದ್ಘಾಟನೆ ಹಾಗೂ ನೂತನ ಗ್ರಾಮ ಶಾಖೆ ಪದಾಧಿಕಾರಿಗಳ ನೇಮಕಗೊಳಿಸಲಾಯಿತು.
ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಖೆ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಶಹಾಪುರ ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ,ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಮಲ್ಲಿಕಾರ್ಜುನ ಉರಸಗುಂಡಗಿ,ಅಲ್ಪಸಂಖ್ಯಾತರ ಘಟಕದ ತಾಲೂಕು ಸಂಚಾಲಕ ಎಮ್.ಪಟೇಲ್ ಮುಖಂಡರಾದ ಚನ್ನಬಸಪ್ಪ ದೇವಾಪುರ,ವಾಸು ಕೋಗಿಲಕರ್ ಶಹಾಪುರ,ಶೇಖರ ಮಂಗಳೂರು,ವೆಂಕಟೇಶ ದೇವಾಪುರ,ರಾಜು ಬಡಿಗೇರ,ಖಾಜಾ ಅಜ್ಮೀರ್,ಎಮ್.ಡಿ ಅಲಿ,ಎಮ್.ಪಟೇಲ್,ಹುಸನಪ್ಪ ದೇವಾಪುರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಗ್ರಾಮ ಶಾಖೆ ಪದಾಧಿಕಾರಿಗಳು: ಸಂಚಾಲಕರಾಗಿ ಹಣಮಂತ ಹೊಸ್ಮನಿ,ಸಂಘಟನಾ ಸಂಚಾಲಕರಾಗಿ ಮಲ್ಲಪ್ಪ ಎನ್.ಪೂಜಾರಿ,ಮೌನೇಶ ಎನ್.ತಳವಾರ,ಮರೆಪ್ಪ ಎಚ್.ಗುಡೇರ,ದೇವಪ್ಪ ಎಮ್.ಎಮ್ಮೆರ ಹಾಗೂ ಖಜಾಂಚಿಯನ್ನಾಗಿ ಹುಸನಪ್ಪ ಪೂಜಾರಿ ಇವರನ್ನು ನೇಮಕಗೊಳಿಸಿ ನೇಮಕಾತಿ ಪತ್ರ ನೀಡಿದರು.