ಶಾಸಕ ರಾಜಾ ವೆಂಕಟಪ್ಪ ನಾಯಕಗೆ ರಂಗಂಪೇಟ ಕನ್ನಡ ಸಾಹಿತ್ಯ ಸಂಘ ಸನ್ಮಾನ

0
5

ಸುರಪುರ: ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘವು ನಿರಂತರವಾಗಿ ಕನ್ನಡ ಸೇವೆ ಸಲ್ಲಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಂಘದ ಜೊತೆ ಇದ್ದು ಕನ್ನಡ ಪರ ಚಟುವಟಿಕೆಗಳಿಗೆ ತನ್ನ ಕೈಲಾದ ನೆರವು ನೀಡುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಶ್ವಾಸನೆ ನೀಡಿದರು.

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಕೈಗೊಂಡ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಉರ್ದು ಭಾಷೆಯು ಪ್ರಭಾವವಿದ್ದ ನಿಜಾಮ ಕಾಲದಲ್ಲಿ ಸ್ಥಾಪನೆಗೊಂಡು ನಿರಂತರವಾಗಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಅಂದಿನ ದಿನದಿಂದಲೂ ನಿರಂತರವಾಗಿ ನಾಡಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಸಂಘದ ಕಾರ್ಯ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದ ಅವರು ಸಂಘದ ಯಾವುದೇ ಬೇಡಿಕೆಗಳಿರಲಿ ಅದಕ್ಕೆ ಸ್ಪಂದಿಸಿ ಸಹಾಯ ಮಾಡುವುದಾಗಿ ಅವರು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೂಗುರೇಶ ವಾರದ, ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ, ಸಂಘದ ಪದಾಧಿಕಾರಿಗಳಾದ ಸೋಮರಾಯ ಶಾಖಾಪುರ,ವೆಂಕಣ್ಣ ಗದ್ವಾಲ್,ಶ್ರೀರಂಗ ಮಿರಿಯಾಲ,ಸೋಮಶೇಖರ ಶಾಬಾದಿ,ಗೋವಿಂದರಾಜ ಶಹಾಪುರಕರ,ಸಿದ್ದಯ್ಯ ಮಠ, ಶರಣಗೌಡ ಪಾಟೀಲ ಜೈನಾಪುರ, ಪ್ರಕಾಶ ಅಲಬನೂರ, ಮಹಾದೇವಪ್ಪ ಗುತ್ತೇದಾರ,ರಘುರಾಮ ಕಡಬೂರು ಹಾಗೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here