ಡಾ. ಚಾಂದಸಾಬಗೆ ಅಂಬೇಡ್ಕರ್ ಪ್ರಶಸ್ತಿ

0
68

ಕಲಬುರಗಿ : ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫೇರ್ ಫೌಂಡೇಶನ್ ಪ್ರತಿ ವರ್ಷ ಉನ್ನತ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ನೀಡುವ ” ಡಾ.ಬಿ.ಆರ್.ಅಂಬೇಡ್ಕರ್ ಅಂತರರಾಷ್ಟ್ರೀಯ ಪ್ರಶಸ್ತಿಗೆ” ಗುಲ್ಬರ್ಗ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮದ ಯುವ ಸಾಹಿತಿ, ವಿಮರ್ಶಕ ಡಾ. ಚಾಂದಸಾಬ್ ಭಾಜನರಾಗಿದ್ದಾರೆ.

ಶೈಕ್ಷಣಿಕ ಮತ್ತು ಸಂಶೋಧನಾ ಮತ್ತು ಸಾಹಿತ್ಯಿಕ ಅನುಭವದ ಸೇವೆಯನ್ನು ಗುರುತಿಸಿ ಡಾ. ಚಾಂದಸಾಬ್ ಅವರು ಉತ್ತಮ ಸಂಶೋಧಕ ಆಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಮಾಡಿ ಒಬ್ಬ ಯುವ ಸಂಶೋಧಕನಾಗಿ ಹೊರಹೊಮ್ಮಿದರಿಂದ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ನವದೆಹಲಿಯ ವರ್ಲ್ಡ್ ಚಾರಿಟಿ ಫೌಂಡೇಶನ್ ತಿಳಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here