ಪ್ರಧಾನಿಗೆ ಜನರು ಕಷ್ಟಪಡುತ್ತಿರುವ ಕುರಿತು ಅರಿವಿಲ್ಲ: ತೆಲುಗು ನಟಿ ವಿಜಯಶಾಂತಿ

0
94

ಕಲಬುರಗಿ: ಪ್ರಧಾನಿ ಮೋದಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು ಸೈನಿಕರು ಹುತಾತ್ಮರಾಗಿರುವ ವಿಚಾರಗಳಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡುತ್ತಾ ಜನರನ್ನು ನಿಜವಾದ ಸಮಸ್ಯೆಗಳಿಂದ ದಾರಿ ತಪ್ಪಿಸುತ್ತಿದ್ದಾರೆ ಎಂದು ಖ್ಯಾತ ತೆಲುಗು ನಟಿ ಹಾಗೂ ರಾಜಕಾರಣಿ ವಿಜಯಶಾಂತಿ ಹರಿಹಾಯ್ದರು.

ಮುಧೋಳ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಚುನಾವಣೆ ಮೋದಿ ಹಾಗೂ ರಾಹುಲ್ ನಡುವೆ ನಡೆದ ಚುನಾವಣೆಯಾಗಿದ್ದು ದೇಶಕ್ಕೆ ಸುಭದ್ರ ಹಾಗೂ ಜನಪರ ಸರಕಾರಕ್ಕಾಗಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿ ಐಟಿ ರೈಡ್ ಮಾಡಿಸುವ ಮೂಲಕ ತಮ್ಮ ಎದುರಾಳಿಗಳಿಗೆ ಭಯ ಹುಟ್ಟಿಸುತ್ತಾರೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶ ಹಿನ್ನಡೆ ಅನುಭವಿಸುತ್ತದೆ  ಎಂದರು.

Contact Your\'s Advertisement; 9902492681

ಬಿಜೆಪಿಯವರು ಮತದಾರರನ್ನು ಓಲೈಸಲು ಎಲ್ಲ ರೀತಿಯ ದಾರಿಗಳನ್ನು ಬಳಸಬಹುದು. ಹಾಗಾಗಿ, ಮತದಾರರು ಅಭಿವೃದ್ದಿಪರ ಇರುವ ಖರ್ಗೆ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್ ಪಕ್ಷದವರನ್ನು ಸೋಲಿಸಿ ಎಂದು ಕರೆಕೊಟ್ಟರು. ನಂತರ ಮಾತನಾಡಿದ ಖರ್ಗೆ ಅವರು ಮೋದಿ ನಿರುದ್ಯೋಗದ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ ಹಾಗಾಗಿ ಐದು ವರ್ಷಗಳಲ್ಲಿ ಸೃಷ್ಟಿಯಾಗಬೇಕಿದ್ದ 10 ಕೋಟಿ ಉದ್ಯೋಗಗಳು ಸೃಷ್ಠಿಯಾಗಿಲ್ಲ ಎಂದು ಹೇಳಿದರು. ವೇದಿಕೆಯ ಮೇಲೆ ಮಾಜಿ ಸಚಿವ ಡಾ‌ ಶರಣಪ್ರಕಾಶ್ ಪಾಟೀಲ್ ಹಾಗೂ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here