ಮೋದಿಯಿಂದ ಲಾಭ ಮಾಡಿಕೊಂಡಿದ್ದು ಶ್ರೀಮಂತರೇ ಹೊರತು ಬಡವರಲ್ಲ: ಖರ್ಗೆ

0
66

ಕಲಬುರಗಿ: ರೈತರ, ಬಡವರ, ಕೂಲಿ ಕಾರ್ಮಿಕರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ವಿರೋಧಿ ಆಡಳಿತ ನಡೆಸಿದ ಮೋದಿಯನ್ನು ಸೋಲಿಸುವಂತೆ ಮತದಾರರಿಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಸೇಡಂ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ರೈತರ ಆದಾಯ ಹೆಚ್ಚಿಸುವ ವಾಗ್ದಾನ ಮಾಡಿದ್ದ ಮೋದಿ ಲಾಭ ಮಾಡಿದ್ದು ಮಾತ್ರ ವಿಮಾ ಕಂಪನಿಗಳಿಗೆ ಎಂದು ಆರೋಪಿಸಿದ ಅವರು ರೈತರಿಂದ ಕಲೆಕ್ಟ್ ಮಾಡಿದ್ದ 48,000 ಕೋಟಿ ವಿಮಾ ಹಣದಲ್ಲಿ ರೈತರಿಗೆ ನೀಡಿದ್ದು ಮಾತ್ರ 20000 ಕೋಟಿ ಉಳಿದ 28000 ಕೋಟಿ ರೈತರ ಹಣವನ್ನು ವಿಮಾ‌ ಕಂಪನಿಗಳಿಗೆ ದಾರೆ ಎರೆದಿದ್ದಾರೆ ಎಂದು ದೂರಿದರು.

Contact Your\'s Advertisement; 9902492681

ಮೋದಿ ತನ್ನ ಬಂಡವಾಳಶಾಹಿ ಧೋರಣೆಯಿಂದಾಗಿ ರೈತರು ಹಾಗೂ ಬಡವರು ಕಂಗಾಲಾಗಿದ್ದರೆ ಅಂಬಾನಿ ಅದಾನಿಯಂತ ಶ್ರೀಮಂತರು ಕೋಟಿಗಟ್ಟಲೇ ಸರಕಾರದ ಲಾಭ ಪಡೆದುಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಮೀನ ಮೇಷ ಎಣಿಸುವ ಮೋದಿ ಶ್ರೀಮಂತ ಉದ್ಯಮಿಗಳ ಒಟ್ಟು 3,75,000 ಕೋಟಿ ಸಾಲ ಮನ್ನಾ ಮಾಡಿ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದರು.

ಮಾಜಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪುಚುಕ್ಕೆ ಇಲ್ಲದಂತೆ ಸಿದ್ದಾಂತದ ತಳಹದಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಜಾಧವ್ ತರ ಹಣದ ಆಣೆಗೆ ಮತ್ತೊಂದು ಪಕ್ಷಕ್ಕೆ ಹೋಗುವಂತೆ ನಾಚಿಕೆಗೆಟ್ಟ ರಾಜಕಾರಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು‌. ಮೋದಿಯ ಹೆಸರೇಳಿ ಮತ ಕೇಳುವವರ ಸಾಧನೆ ಏನೆಂದು ಮತದಾರರು ಕೇಳಬೇಕು ಎಂದು ಮನವಿ ಮಾಡಿ, ಅಭಿವೃದ್ದಿ ಪರವಿರುವ ಖರ್ಗೆ ಅವರನ್ನು ಗೆಲ್ಲಿಸುವ ಮೂಲಕ ಮೋಸಗಾರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ವೇದಿಕೆಯ ಮೇಲೆ ಮಾಜಿ ರಾಜ್ಯಸಭಾ ಸದಸ್ಯ ‌ಕೆ.ಬಿ.ಶಾಣಪ್ಪ, ಮುಕ್ರಮ್ ಖಾನ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here