12 ಕೆ.ಜಿ ಅಕ್ರಮ ಗಾಂಜಾ ವಶ

0
50

ಬೆಂಗಳೂರು; ಬೆಂಗಳೂರು ನಗರ ಜಿಲ್ಲೆಯ-5 ಅಬಕಾರಿ ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಅವರ ಮಾರ್ಗದರ್ಶನದಲ್ಲಿ ಉಪವಿಭಾಗ-10 ರ ಅಬಕಾರಿ ಉಪ ಅಧೀಕ್ಷಕರಾದ ದೇವರಾಜ್ ಅವರ ನೇತೃತ್ವದಲ್ಲಿ ಅಬುಬಕರ್ ಮುಜಾವರ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ವಲಯ ಸಂಖ್ಯೆ-30 ಇವರು ಮಹದೇವಪುರ ವ್ಯಾಪ್ತಿಯ ಹೂಡಿ ಬ್ರಿಡ್ಜ್ ಹತ್ತಿರ, ಹೂಡಿಕೆರೆ ಸಮೀಪದ ಅಂಖೊರ್ ಹೋಟೆಲ್ ಬಳಿ ಮತ್ತು ಹೂಡಿ ಮೆಟ್ರೋ ಸಮೀಪದ ಡಿ ಮಾರ್ಟ್ ಹತ್ತಿರದ ರಸ್ತೆಯಲ್ಲಿ ಆಗಸ್ಟ್ 20 ರಂದು 3 ಕಡೆ ಪ್ರತ್ಯೇಕ ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 12 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಂಡು ಆರೋಪಿಗಳಾದ ಅರ್ಜುನ್ ಯಾದವ, ಲಲಿತ ಮಹತೋ ಮತ್ತು ಮೊಹಮ್ಮದ್ ಮಣ್ಣಾನ್ ಎಂಬುವವರನ್ನು ಬಂಧಿಸಿ ಎನ್.ಡಿ.ಪಿ.ಎಸ್ ಕಾಯ್ದೆ -1985 ರಡಿ 03 ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆಯ-05 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here