ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಗೆ ಭಾಸಗಿ ನೇತೃತ್ವದಲ್ಲಿ ಮನವಿ

0
17

ಕಲಬುರಗಿ ನಗರದ ತಾರಫೈಲ್ ಬಡಾವಣೆಯ ಸರಕಾರಿ ಪ್ರೌಢ ಶಾಲೆ ತಾರಫೈಲ್ ಶಾಲೆಗೆ ಬಿಸಿ ಊಟದ ಸಲುವಾಗಿ ಅಡುಗೆ ಕೋಣೆ ಮತ್ತು ಶಾಲೆಯ ಸುತ್ತ ಕಂಪೌಂಡ ವಾಲ್ ಮಂಜೂರು ಮಾಡಬೇಕೆಂದು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್, ಭಾಸಗಿ ನೇತೃತ್ವದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ನಗರದ ತಾರಫೈಲ್ ಬಡಾವಣೆಯಲ್ಲಿರುವ ಸರಕಾರಿ ಪ್ರೌಢ ಶಾಲೆ ತಾರಫೈಲ್ ಈ ಶಾಲೆಯಲ್ಲಿ ಬಿಸಿ ಊಟದ ಕೋಣೆ ಇರುವುದಿಲ್ಲ ಮತ್ತು ಶಾಲೆಯ ಸುತ್ತ ಮುತ್ತಲು ಕಂಪೌಂಡ ಪಾಲ್ ಇರುವುದಿಲ್ಲ ಇದರಿಂದ ಮಳೆಗಾಲದ ಸಮಯದಲ್ಲಿ ಮಳೆ ನೀರು ಹರಿದು ಬಂದು ಶಾಲೆಯ ಮುಂದೆಯೇ ನಿಂತುಕೊಳ್ಳುವುದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಓಡಾಡಲು ಮಧ್ಯಾಹ್ನ ಊಟದ ಸಮಯದಲ್ಲಿ ಊಟ ಮಾಡಲು ಹಾಗೂ ಆಟವಾಡಲು ಇನ್ನಿತರ ಚಟುವಟಿಕೆಗಳು ನಡೆಸಲು ತೊಂದರೆಯಾಗುತ್ತದೆ. ಅಲ್ಲದೆ ಹಂದಿ ನಾಯಿಗಳು ಶಾಲಾವಧಿಯಲ್ಲಿ ಬರುವುದರಿಂದ ಮಕ್ಕಳಿಗೆ ತೋಂದರೆಯಾಗುತ್ತದೆ. ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಹುಸೇನ, ಯಲ್ಲೇಶ, ದೀಪಕ, ಸಿದ್ಧಾರೂಡ, ಶ್ರೀಧರ, ಶ್ರೀನಾಥ, ಸಾಗರ ಕಾಂಬಳೆ, ಅನೀಲ ತಳವಾರ, ಆನಂದ ಕೊಳ್ಳೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here