ಧಮ್ಮ ವಂದನ ಕಾರ್ಯಕ್ರಮ: ಶಾಸಕ ಆರ್.ವಿ ನಾಯಕ ಭೇಟಿ

0
9

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಹುಣ್ಣಿಮೆ ಅಂಗವಾಗಿ ಧಮ್ಮ ವಂದನ ಕಾರ್ಯಕ್ರಮ ನಡೆಸಲಾಯಿತು.ವರಜ್ಯೋತಿ ಬಂತೇಜಿಯವರ ನೇತೃತ್ವದಲ್ಲಿ ಧಮ್ಮ ಜ್ಯೋತಿ,ಸಂಗ ಜ್ಯೋತಿ,ವಿನಯ ಜ್ಯೋತಿ ಹಾಗೂ ಸುಮಿದ್ ಬಂತೇಜಿಯವರು ಭಾಗವಹಿಸಿ ಧಮ್ಮ ವಂದನ ಕಾರ್ಯಕ್ರಮ ನಡೆಸಿಕೊಟ್ಟರು.ಆರಂಭದಲ್ಲಿ ಮಹಾತ್ಮ ಗೌತಮ್ ಬುದ್ಧರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮೇಣದ ಬತ್ತಿ ಬೆಳಗಿ ನಂತರ ಪಂಚಶೀಲ ತ್ರಿಸರಣ ಪಠಣದ ಮೂಲಕ ಧಮ್ಮ ವಂದನ ಕಾರ್ಯಕ್ರಮ ನಡೆಸಲಾಯಿತು.

ನಂತರ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿಯವರ ಮೊಮ್ಮಗ ನಾಮಕರಣ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಭಾಗವಹಿಸಿದ್ದರು,ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು ಬುದ್ಧ ವಿಹಾರದ ಅಭಿವೃಧ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ,ರಾಜಾ ವಾಸುದೇವ ನಾಯಕ,ವೆಂಕೋಬ ಯಾದವ್,ಅಬ್ದುಲ್ ಗಫೂರ ನಗನೂರಿ,ರಾಜಾ ಪಿಡ್ಡ ನಾಯಕ,ನರಸಿಂಹಕಾಂತ ಪಂಚಮಗಿರಿ, ಯಲ್ಲಪ್ಪ ಕಾಡ್ಲೂರ,ಹಣಮಂತ್ರಾಯ ಮಕಾಶಿ ಹಾಗೂ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ ಮಾಳಪ್ಪ ಕಿರದಳ್ಳಿ,ರಾಹುಲ್ ಹುಲಿಮನಿ,ಭೀಮರಾಯ ಸಿಂದಗೇರಿ,ಆದಪ್ಪ ಹೊಸ್ಮನಿ,ಹಣಮಂತ ಭದ್ರಾವತಿ,ಪ್ರೋ:ಮಾನು ಗುರಿಕಾರ,ವೆಂಕಟೇಶ ಸುರಪುರ, ಮಲ್ಲು ಮುಷ್ಠಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here