ಚಿತ್ತಾಪುರ: ವಿಶ್ವ ರತ್ನ ನಡೆದಾಡುವ ಭಗವಂತ ಬಂಜಾರ ಸಮಾಜದ ಧರ್ಮಗುರುಗಳಾದ ಡಾ,ರಾಮ್ ರಾವ್ ಮಹಾರಾಜರು ಒಬ್ಬ ಮಹಾನ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದವರು ಆಗಿದ್ದರು ಹೀಗಾಗಿ ನಾವು ಬಂಜಾರ ಸಮಾಜದ ಪ್ರತಿಯೊಬ್ಬರು ಅವರ ಆದರ್ಶಗಳು ಮೈಗೂಡಿಸಿಕೊಳ್ಳಬೇಕು ಎಂದು ಪ.ಪೂ ಶ್ರೀ ವಿಠ್ಠಲ್ ಮಹಾರಾಜರ ಹೇಳಿದರು.
ಪಟ್ಟಣದ ಶ್ರೀ ಸೇವಾ ಗುರುಕುಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ ರಾಮ್ ರಾವ್ ಮಹಾರಾಜರ 90ನೇ ಜಯಂತ್ಯುತ್ಸವ ನಿಮಿತ್ಯ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ರಾಮ್ ರಾವ್ ಮಹಾರಾಜರು ನಮ್ಮ ಸಮಾಜದ ಆದರ್ಶ ಗುರುಗಳು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮಹೇಶ್ ಪತ್ತಾರ್ ಸಾಹುಕಾರ್
ಮದನ್ ರಾಠೊಡ, ಶಂಕರ್ ರಾಠೊಡ,ಸುನಿಲ್ ರಾಠೊಡ, ರೆಡ್ಡಿ ಬಂಜಾರ, ಹಾಗೂ ಶಾಲೆಯ ಪ್ರಾಂಶುಪಾಲರು ಮತ್ತು ಸಹಶಿಕ್ಷಕರ ವಿದ್ಯಾರ್ಥಿನಗಳು ಇದ್ದರು.