ಕಲಬುರಗಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

0
27

ಕಲಬುರಗಿ: ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಹಿಳೆಗೆ ಕಿರುಕುಳ ನೀಡಿ ಹೊಡೆದು ಹತ್ಯೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವಂತೆ ನೇಣು ಬಿಗಿದ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಸೀತನೂರ ಗ್ರಾಮದಲ್ಲಿ ನಡೆದಿದೆ

ಗವಾರ ಗ್ರಾಮದ ಮಗಳಾದ ಸಾಯಿದಾ ಬೇಗಂ (21) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಮೂರು ವರ್ಷದ ಹಿಂದೆ ಸೀತನೂರು ಗ್ರಾಮದ ಖಾಜಾ ಹುಸೇನ್ ಎಂಬ ವ್ಯಕ್ತಿಯ ಜೊತೆಗೆ ಸಯಿದಾ ಬೇಗಂ ಎರಡನೇಯ ಮದುವೆ ಮಾಡಿ ಕೊಡಲಾಗಿತ್ತು.

Contact Your\'s Advertisement; 9902492681

ಕೃಷಿ ಮಾಡುತ್ತಿದ್ದ ಖಾಜಾ ಹುಸೇನ್ ಈ ಹಿಂದೆಯು ವರದಕ್ಷಿಣೆ ವಿಚಾರವಾಗಿ ಸಾಯಿದಾ ಬೇಗಂಗೆ ಹೊದೆಡು ತವರು ಮನೆಗೆ ಕಳುಹಿಸಿದ, ಗ್ರಾಮದ ಜನರ ಹಿರಿಯರು ಕೂಡಿ ರಾಜಿ ಪಂಚಾಯತಿ ಮಾಡಿ ಸಯಿದಾ ಬೇಗಂಗೆ ಮತ್ತೆ ಗಂಡನ ಮನೆಗೆ ಕಳುಹಿಸಲಾಗಿತ್ತು.

ರಾಜಿ ಪಂಚಾಯತಿಯಿಂದ ಅಸಮಾಧಾನವಾಗದ ಖಜಾ ಹುಸೇನ್ ಪದೇ ಪದೇ ಬಂಗಾರ ತರುವಂತೆ ಮತ್ತೆ ಕಿರುಕುಳ ನೀಡಲು ಪ್ರಾರಂಭಿಸಿದ. ನಿನ್ನೆ ಮಧ್ಯಾನ್ಹ ಸಾಯಿದಾ ಬೇಗಂಗೆ ಹೊಡೆದು ಆಕೆ ಸಾವನಪ್ಪಿದ ಬಳಿಕ ದೇಹವನ್ನು ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಫರತಬಾದ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾನೆ ಎಂದು ತಿಳಿದುಬಂದಿದೆ.

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತರ ಪರೀಕ್ಷೆಗೆ ಮೃತದೆಹ ರವಾನಿಸಿದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು ಇದು ಆತ್ಮಹತ್ಯೆ ಅಲ್ಲ ಕೊಲೆಯಂದು ಆರೋಪಿಸಿದ್ದಾರೆ.

ಈ ಕುರಿತು ಫರಹತಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here