ಬೈಕ್ ಮತ್ತು ಕಾರು ಮದ್ಯೆ ಡಿಕ್ಕಿ ಒರ್ವ ಸಾವು ಇಬ್ಬರು ಗಂಭೀರ ಗಾಯ

0
144

ಕಲಬುರಗಿ: ಕಮಲಾಪೂರ ತಾಲ್ಲೂಕಿನ ಗುರುದತ್ತ ಪೆಟ್ರೋಲ್ ಬಂಕ್ ಹತ್ತಿರ ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಒರ್ವ ಬೈಕ್ ಸವಾರ ಮೃತಪಟ್ಟ ಹಾಗೂ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ ಜರುಗಿದೆ.

ಶ್ರೀಕಾಂತ ಮಲ್ಲಪ್ಪ ವಗ್ಗೆ (26) ಮೃತಪಟ್ಟ ಬೈಕ್ ಸಾವಾರ, ವಗ್ಗೆ ಜಿಲ್ಲೆಯ ಜಿಂಗಟಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದ್ದು, ಕಲಬುರಗಿ ನಗರದ ಹರಿಜವಾಡ ಬಡಾವಣೆ ತಾಜೋದ್ದಿನ್ ಹಾಗೂ ಅವರ ಪತ್ನಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ವಗ್ಗೆ ಹಿಂದುಳಿದ ವರ್ಗಗಳ ಇಲಾಖೆಯ ಮಹಾಗಂವ ಕ್ರಾಸ್ ವಸತಿ ನಿಲಯದಲ್ಲಿ ಗುತ್ತಿಗೆಯಾಧರದಲ್ಲಿ ಕಾರ್ಯ ನಿರ್ವಹಿಸಿದ್ದು, ನಿನ್ನೆ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ವಗ್ಗೆ ಅವರು ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿದ್ದಾಗ ಎದುರಿಂದ ಬಂದ ಕಾರು ಡಿಕ್ಕಿ ಹೊಡೆದು ನಂತರ ತಾಜೋದ್ದಿನ್ ಅವರ ಹಿಂದೆ ಬರುತಿದ ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಥಮ ಮಾಹಿತಿ ಎಂದ ತಿಳಿದುಬಂದಿದೆ.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here