ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಕರೆ

0
12

ಕಲಬುರಗಿ: ನಗರದ ಶ್ರೀಮತಿ ಕಸ್ತೂರಬಾಯಿ ವಿಠ್ಠಲರಾವ ಪಾಟೀಲ ದಣ್ಣೂರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೆ.ವಿ.ಪಿ.ದಣ್ಣೂರಪಿ.ಯು. ಕಾಲೇಜು, ಗುರುಜಿ ಪದವಿ ಮಹಾವಿದ್ಯಾಲಯ, ಅಜೋದ್ಯಾಬಾಯಿ, ಕಿ.ಪ್ರಾ.ಶಾಲೆ ಮತ್ತು ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಯೇ ಸೇವೆ, ಪ್ಲಾಸ್ಟಿಕ್ ಮುಕ್ತ ಪರಿಸರ ಹಾಗೂ ರಾಷ್ಟ್ರೀಯ ಪೆÇೀಷಣ ಮಾಸ ಕುರಿತು ವಿಶೇಷ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಕೃಷ್ಣ ನಾಯಕ ಉದ್ಘಾಟಿಸಿದರು.

ಕೆ.ವಿ. ಪಿ.ಮತ್ತು ಗುರೂಜಿ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಕಲ್ಯಾಣರಾವ ಶೀಲವಂತ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಹಾಗೆಯೇ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸೂರ್ಯಕಾಂತಿ ಮಾತನಾಡುತ್ತಾ ಪ್ಲಾಸ್ಟಿಕ್ ಬಳಕೆಯಅನಾಹುತಗಳು ಮತ್ತು ಅದರಿಂದ ಪಾರಾಗುವದಾರಿಗಳು ಅಲ್ಲದೆ ಅಪೌಷ್ಟಿಕತೆಯಿಂದ ಆಗುತ್ತಿರುವ ತೊಂದರೆಗಳು ಕುರಿತು ಸವಿವರವಾದ ವಿಷಯ ಮಂಡನೆ ಮಾಡಿದರು.

ಕೆ.ವಿ.ಪಿಕಾಲೇಜಿನ ಪ್ರಚಾರ್ಯ ಎಸ್.ಎಸ್. ಪಾಟೀಲ ಮಾತನಾಡಿ ಅರಿವು ಆಚಾರ ಅನುಭಾವ ಅಳವಡದೆಯಾವುದೇಕಾರ್ಯ ಫಲಿಸದು ಸ್ವಚ್ಛತೆ ಬಗ್ಗೆ ನಮಗೆ ಅರಿವು ಇದೆ ಆದರೆ ಅದನ್ನು ನಾವು ಆಚರಿಸಲಾರೆವು. ತಿಳಿದವರೇ ಎಲ್ಲೆಂದರಲ್ಲಿ ಕಸ ಹಾಕುವ, ಎಲ್ಲೆಂದರಲ್ಲಿ ಉಗುಳುವ, ಮೂತ್ರ ವಿಸರ್ಜನೆ ಮಾಡುವಲ್ಲಿ ಎಲ್ಲಿ ಆಚಾರ ಇದೆ ಎಂದರು.

ಪಾಲಿಕೆ ಅಧಿಕಾರಿ ತುಕ್ಕಾ ರೆಡ್ಡಿ ಯವರು ಒಣ ಕಸ, ಹಸಿಕಸ, ಜೈವಿಕಕಸ ಇವುಗಳ ವಿಲೇವಾರಿ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತ ಬಾಬುರಾವ ಮೇಲಿನಕೇರಿ, ಶರಣಪ್ಪ ಶೀಲವಂತ, ಮುಖ್ಯೋಪಾಧ್ಯಾಯನಿ ಸುಲೋಚನಾ ಜೋಳದ, ಸಂವಹನ ಇಲಾಖೆಯ ಸಹಾಯಕಅಧಿಕಾರಿ ನಾಗಪ್ಪ ಅಂಬಾಗೋಳ ಇದ್ದರು.

ಉಪನ್ಯಾಸಕಿ ಶ್ವೇತಾಶಟ್ಟಿ ನಿರೂಪಿಸಿದರು, ಶಿಲ್ಪಾ ಸ್ವಾಗತಿಸಿದರು, ಮತ್ತು ಜ್ಯೋತಿ ಶೀಲವಂತ ವಂದಿಸಿದರು, ಕಾಶಿನಾಥ ಬಿರಾದಾರ ವಿಶ್ವಜ್ಯೋತಿ ಕಲಾತಂಡ ಮತ್ತು ದತ್ತರಾಜ ಕೆ.ಕಲಶೆಟ್ಟಿ ಕಲಾ ತಂಡದವರಿಂದ ಪರಿಸರ ಕುರಿತು ಹಾಡು, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಥಮಿಕ ಶಾಲೆಯ ಕೆ.ವಿ.ಪಿ ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು ಓಣಿಯನಾಗರಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here