ಅಬಕಾರಿ ಸಚಿವರನ್ನು ಅಭಿನಂದಿಸಿದ ತುಮಕೂರು ಜಿಲ್ಲಾ ಮಾದಿಗ ಸಮುದಾಯ ಬಳಗ

0
18

ತುಮಕೂರು: ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಗೆದ್ದು, ಮತ್ತೊಮ್ಮೆ ಅಬಕಾರಿ ಸಚಿವರಾಗಿರುವ ಆರ್.ಬಿ. ತಿಮ್ಮಾಪುರ ಅವರನ್ನು ತುಮಕೂರು ಜಿಲ್ಲಾ ಮಾದಿಗ ಸಮುದಾಯ ಬಳಗದಿಂದ ಅಭಿನಂದಿಸಲಾಯಿತು.

ಚುನಾವಣೆ ಬಳಿಕ ತುಮಕೂರು ಜಿಲ್ಲಾ ಮಾದಿಗ ಬಳಗದ ವತಿಯಿಂದ ಸಮುದಾಯದ ಸಚಿವರು ಹಾಗೂ ಜಿಲ್ಲೆಯ‌ ಶಾಸಕರಿಗೆ ಅಭಿನಂದನಾ ಸಮಾರಂಭ ನಡೆಯಿತು. ಈ ವೇಳೆ‌ ಮಾತನಾಡಿದ ಸಚಿವ ಆರ್.ಬಿ‌.ತಿಮ್ಮಾಪುರ, ‘ಈ ಹಿಂದೆ ಚುನಾವಣೆ ಮತ್ತು ಮತದಾನದ‌‌ ವರೆಗೆ‌ ಮಾತ್ರ ರಾಜಕಾರಣಿಗಳ ಜೊತೆ ಒಡನಾಟ ಇತ್ತು. ಈಗ ಚುನಾವಣೆ ಬಳಿಕವೂ ಸಮುದಾಯವರಿಗೆ ಅಭಿನಂದನಾ‌ ಸಮಾರಂಭ ಮಾಡುವ ಮೂಲಕ ಗಮನ ಸೆಳೆದಿದೆ.. ಇದು ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸಿದೆ. ಲಕ್ಷಾಂತರ ಮಂದಿ ಇರುವ ಸಮುದಾಯ ಹೆಚ್ಚು ಮತದಾನದ ಜಾಗೃತಿ ಮೂಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here