ವೈಜ್ಞಾನಿಕ ಮನೋಭಾವನೆಜತೆ ಸಂಸ್ಕಾರ ಬೆಳೆಸಿ

0
18

ಕಲಬುರಗಿ: ಪ್ರಶಿಕ್ಷಣಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸುವುದು ಶಿಕ್ಷಕರ ಜವಾಬ್ದಾರಿ ಎಂದು ದೇವಿಂದ್ರ ವಿಶ್ವಕರ್ಮ ಹೇಳಿದರು.

ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿವಿಧ ಸಹಪಠ್ಯ ಚಟುವಟಿಕೆಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಹಪಠ್ಯ ಚಟುವಟಿಕೆಗಳಲ್ಲಿ ಹಲವು ವಿಧಗಳಿದ್ದು, ಸಹಪಠ್ಯ ಚಟುವಟಿಕೆಯಲ್ಲಿ ಕಲೆ, ಸಾಹಿತ್ಯ, ಜಾನಪದ ಕಲೆಗಳ ಅನಾವರಣದಿಂದ ವಿದ್ಯಾರ್ಥಿಗಳು ಸಾಂಸ್ಕøತಿಕವಾಗಿ ಮುಂದುವರೆಯುತ್ತಾರೆ.

Contact Your\'s Advertisement; 9902492681

ಸಹಪಠ್ಯ ಚಟುವಟಿಕೆಯಲ್ಲಿ ಕ್ರೀಡೆಯು ಬಹಳ ಮಹತ್ವದ್ದಾಗಿದ್ದು, ಮಕ್ಕಳ ದೈಹಿಕ ಮಾನಸಿಕ ಬೆಳೆವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಮತ್ತು ದೇಹ ಸಧೃಢವಾಗಿರುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಸ್ಪರ್ಧಾ ಮನೋಭವನೆ ಬೆಳೆಯಬೇಕಾದರೆ ಮೊದಲು ಶಿಕ್ಷಕರು ವಿವಿಧ ಸಹಪಠ್ಯಗಳಲ್ಲಿ ಭಾಗವಹಿಸಬೇಕು.

ಕಲೆ, ಸಂಸ್ಕøತಿ, ಕ್ರೀಡೆ, ಎನ್‍ಸಿಸಿ ಹಾಗೂ ಎನ್‍ಎಸ್‍ಎಸ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸದಾ ತಮ್ಮನ್ನು ತಾವೇ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಪರಿಪೂರ್ಣವಾಗುತ್ತದೆ. ಶಿಕ್ಷಕರ ಮಾತುಗಳನ್ನು ಪ್ರಶಿಕ್ಷಣಾರ್ಥಿಗಳು ತಪ್ಪದೇ ಪಾಲಿಸಬೇಕು. ಸಮಾಜ ಸುಧಾರಣೆಗೆ ಗುರು, ತಾಯಿ ಮತ್ತು ತಂದೆ ಪಾತ್ರ ಪ್ರಮುಖ. ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಗುರುಗಳು ಮಕ್ಕಳಿಗೆ ಉತ್ತಮ ಸಂಸ್ಕಾರವೆಂಬ ಬೀಜ ಬಿತ್ತಬೇಕು. ಮುಂದೆ ಹೆಮ್ಮರವಾಗಿ ಸಮಾಜಕ್ಕೆ ನೆರಳು ನೀಡುತ್ತದೆ. ಸಂಸ್ಕಾರಯುತ ಶಿಕ್ಷಣ ಇಂದು ಅಗತ್ಯವಾಗಿದೆ ಎಂದು ಶಿಕ್ಷಣತಜ್ಞ ದೇವಿಂದ್ರ ವಿಶ್ವಕರ್ಮ ಹೇಳಿದರು.

ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಐಶು ಎಮ್, ಶಿವಾನಿ, ಐಶ್ವರ್ಯ, ತಾಯಮ್ಮ, ಶರಣಮ್ಮ, ಮೆಹಜಬಿನ್, ರೇಷ್ಮಾ, ರೇಣುಕಾ, ಭಾಗ್ಯಶ್ರೀ ಪಾಟೀಲ್, ಭವಾನಿ ಮಾಲಿಪಾಟೀಲ್, ಅಂಬಿಕಾ, ಶಾಹೀನ್, ಸುಧಾ, ಸವಿತಾ ಎಮ್, ರಾಜಶ್ರೀ ಬಿರಾದಾರ, ಲಕ್ಷ್ಮೀ, ಮೋನಿಕಾ, ದಾನೇಶ್ವರಿ, ಬಸಮ್ಮಾ ಆರ್, ದಾನಮ್ಮ, ರೂಪಾ, ಪೂಜಾ ಎಸ್ ನಂದಿ, ಜ್ಯೋತಿ ಎಮ್, ಕುಶಾಲ್, ಸಕ್ಕರೆಪ್ಪ, ರಿಯಾಜ್, ಸುರೇಶ್, ಇಸ್ಮಾಯಿಲ್, ಶಿವರಾಜ್ ಮಹಾಂತೇಶ ಸೇರಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here