ವಾಡಿ: ಪಟ್ಟಣದ ಸಿದ್ಧಾರ್ಥ ತರುಣ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್ ಕಾಲೋನಿಯ ದಲಿತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸುವ ಮೂಲಕ ಈ ನೂತನ ಸಮಿತಿ ರಚಿಸಲಾಗಿದೆ ಎಂದು ಬೌದ್ಧ ಸಮಾಜದ ಪ್ರಧಾನ ಕಾರ್ಯದರ್ಶಿ ದೇವಿಂದ್ರ ನಿಂಬರ್ಗಾ ಹಾಗೂ ದಲಿತ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ತಿಳಿಸಿದ್ದಾರೆ.
ಶರಣು ರಾವೂರಕರ (ಅಧ್ಯಕ್ಷ), ಕಿರಣ್ ರಾಜನಾಳಕರ, ಬಾಬು ಶಿಕಾರಿ, ಶಿವುಕುಮಾರ ಕೇತನಕರ (ಉಪಾಧ್ಯಕ್ಷರು), ಮೋಹನ ಮಾಲಗತ್ತಿ (ಪ್ರಧಾನ ಕಾರ್ಯದರ್ಶಿ), ಸಂತೋಷ ಆಲೂರಕರ, ಶರಣಬಸು ಕಟ್ಟಿಮನಿ, ಶಿವಾನಂದ ನಾಟೇಕರ (ಸಹ ಕಾರ್ಯದರ್ಶಿಗಳು), ಪ್ರಮೋದ ಕಿಣ್ಣಿಕರ (ಖಜಾಂಚಿ) ಹಾಗೂ ಇತರರು ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.