ಆಧಾರ್ ಸೀಡಿಂಗ್ ಮಾಡಿಸುವಂತೆ ರೈತರಲ್ಲಿ ಮನವಿ

0
135

ಕಲಬುರಗಿ: ಸರ್ಕಾರದ ವಿವಿಧ ಸೌಲಭ್ಯ ರೈತ ಬಾಂಧವರಿಗೆ ನೇರವಾಗಿ ಒದಗಿಸಲು ಮತ್ತು ಡಿ.ಬಿ.ಟಿ. ಮೂಲಕ ಸಹಾಯಧನ ಪಾವತಿ ನಿಟ್ಟಿನಲ್ಲಿ ಶಹಾಬಾದ ತಾಲ್ಲೂಕಿನ ರೈತ ಬಾಂಧವರು ತಮ್ಮ ಜಮೀನಿನ ಪಹಣಿ ಪತ್ರಿಕೆಯ ಸರ್ವೆ ನಂಬರ್ ಗೆ ಆಧಾರ ಸಂಖ್ಯೆ (ಆಧಾರ ಸೀಡಿಂಗ್) ಜೋಡಣೆ ಮಾಡಿಸುವಂತೆ ತಹಶೀಲ್ದಾರ ಜಗದೀಶ್ ಚೌರ್ ಅವರು ಮನವಿ ಮಾಡಿದ್ದಾರೆ.

ಶಹಾಬಾದ ತಾಲ್ಲೂಕಿನ ಎಲ್ಲಾ ರೈತ ಬಾಂಧವರು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಆಧಾರ್ ಸೀಡಿಂಗ್ ಮಾಡಿಕೊಳ್ಳುವಂತೆ ಕೋರಲಾಗಿದೆ.

Contact Your\'s Advertisement; 9902492681

ಗ್ರಾಮವಾರು ಆಡಳಿತ ಅಧಿಕಾರಿಗಳು ಮತ್ತು ಅವರ ಮೊಬೈಲ್ ಸಂಖ್ಯೆ: ಶಹಾಬಾದ-9945005685, ಮರತೂರ-7022070036, ಹೊನಗುಂಟಾ-9880913235, ತೊನಸನಹಳ್ಳಿ (ಎಸ್) ಮತ್ತು ಕಡೆಹಳ್ಳಿ-9902568002, ದೇವನತೆಗನೂರ, ತರನಳ್ಳಿ, ಮುತ್ತಗಾ ಹಾಗೂ ಜೀವಣಗಿ-9880778317, ಶಂಕರವಾಡಿ ಮತ್ತು ಮಾಲಗತ್ತಿ-9035167903, ರಾವೂರ ಮತ್ತು ಗಾಂಧಿನಗರ-8105446444, ಮುಗುಳನಾಗಾಂವ- 9590029999, ಗೋಳಾ(ಕೆ)-9113855840, ಭಂಕೂರ, ಸೇವಾ ನಗರ ಹಾಗೂ ಅಲ್ದಿಹಾಳ-9844792170.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here