ಕಲಬುರಗಿ: ಜೇವರ್ಗಿ ಕ್ರಾಸ್ ಹತ್ತಿರವಿರುವ ಮಾಲು ಅಪಾರ್ಟಮೆಂಟನಲ್ಲಿ ಶೈಲಜಾ ವಿಶ್ವನಾಥ ಸಿರಗಾಪೂರೆ ಅವರ ಮನೆಯಲ್ಲಿ ಕು. ತರುಣ ಶ್ರೀ ಕೃಷ್ಣ ನ ವೇಷ ಭೂಷಣ ಧರಿಸಿ ನಟಿಸುತ್ತಾ ಆತನ ಸಂದೇಶ ಹೇಳುವ ಮೂಲಕ ಕೃಷ್ಣ ಜನ್ಮಾಷ್ಟಮಿ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಭಜನಾ ಮಂಡಳಿಯ ವತಿಯಿಂದ ಒಂದು ಗಂಟೆ ಕಾಲ ಕೃಷ್ಣನ ಲೀಲೆ ಕುರಿತು ಭಜನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ರೇಖಾ ಅಂಡಗಿ, ಶೈಲಜಾ ಸಿರಗಾಪೂರೆ, ಸವಿತಾ ವಿ.ಪಿ, ಶೈಲಜಾ ಎನ್ ಬಿ, ಅರ್ಪಣಾ ಕೊಳಸೂರ, ಸುಮಿತ್ರಾ ಕೊಳಸೂರ, ಸೌಮ್ಯ ಗುಗ್ಗವಾಡ, ಮಾನೆ ಎಸ್, ಸಂಧ್ಯಾ ರಾವ್, ನಾಗವೇಣಿ ಸಿ ಕುರಕೊಟಿ, ಶಿವಲಿಲಾ, ಎಸ್ ಎಮ್ ನಾಗವೇಣಿ,ಪೂರ್ಣಿಮಾ, ಟಿ ಅರ್ಪಣಾ, ಉಮಾ ಚಿಲ್ಲಾಳ್, ಪಾರ್ವತಿ ಡಿ, ಸುವಿಕ್ಷಾ, ಲೊಕೇಶ್ವರಿ, ಭಾರತಿ ಭಂಡಾರಿ, ರಾಣಿ, ವರುಣ, ತರುಣ, ಶರಣಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.