ಕೋಡ್ಲಾದಲ್ಲಿ ಜ. 13 ರಂದು ಕುವೆಂಪು ದರ್ಶನ ; ವಿಶ್ವ ಮಾನವ ಸಾರಿದ ಸಂದೇಶ ವಿಶೇಷ ಕಾರ್ಯಕ್ರಮ

0
73

ಕಲಬುರಗಿ: ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕಸಾಪ ವಲಯ ಘಟಕದ ಆಶ್ರಯದಲ್ಲಿ ಜ.‌೧೩ರಂದು ಮಧ್ಯಾಹ್ನ ೨ ಗಂಟೆಗೆ ಕುವೆಂಪು ದರ್ಶನ ; ವಿಶ್ವ ಮಾನವ ಸಾರಿದ ಸಂದೇಶ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಲಯ ಕಸಾಪ ಪದಾಧಿಕಾರಿಗಳು ತಿಳಿಸಿದ್ದಾರೆ.

ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದು ಬಾನರ್ ಉದ್ಘಾಟಿಸಲಿದ್ದು, ಕೋಡ್ಗಾ ಗ್ರಾಪಂ‌ ಅಧ್ಯಕ್ಷ ಅನಿಲಕುಮಾರ ನಾಮದಾರ ಅಧ್ಯಕ್ಷತೆ ವಹಿಸಲಿದ್ದಾರೆ.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಾಹಿತಿ-ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಅವರು ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಸಿಪಿಐ ಶಂಕರಗೌಡ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಅವರನ್ನು ಸತ್ಕರಿಸಲಾಗುವುದು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರೆಡ್ಡಿ, ಸಂಶೋಧಕ ಮುಡಬಿ ಗುಂಡೇರಾವ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕೋಡ್ಲಾ ವಲಯ ಕಸಾಪ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ಗಚ್ಚಿನಮಠ, ರಾಮಚಂದ್ರ ಗುತ್ತೇದಾರ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇವೇಳೆಯಲ್ಲಿ ಕಲಬುರಗಿ ರಂಗಾಯಣದ ವತಿಯಿಂದ ಶ್ರೀಪಾದ ಬಟ್ ನಿರ್ದೇಶನದ ಪಾಪು ಗಾಂಧಿ ಬಾಪು ಗಾಂಧಿ ನಾಟಕ ಪ್ರದರ್ಶನವಾಗಲಿದೆ ಎಂದು ಕಸಾಪ ವಲಯ ಕಾರ್ಯದರ್ಶಿ ನಾಗಯ್ಯ ಮಠ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here