ಹಿರಿಯ ಪತ್ರಕರ್ತ ಪಿಎಂ ಮಣ್ಣೂರ ನಿಧನಕ್ಕೆ ವಾರ್ತಾ ಅಧಿಕಾರಿ ಸಂತಾಪ

0
32

ಕಲಬುರಗಿ: ಹಿರಿಯ ಮುತ್ಸದ್ಧಿ ಪತ್ರಕರ್ತರಾದ ಸತ್ಯಕಾಮ ಪತ್ರಿಕೆಯ ಸಂಪಾದಕರಾದ ಪಿ ಎಂ ಮಣ್ಣೂರ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿಯ ಉಪನಿರ್ದೇಶಕರಾದ ಸಿದ್ದೇಶ್ವರಪ್ಪ .ಜಿ.ಬಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಆತ್ಮೀಯರಾಗಿದ್ದ ಮಣ್ಣೂರ ಅವರು 78 ವರ್ಷ ವಯಸ್ಸಾಗಿದ್ದರೂ, ಲವಲವಿಕೆಯಿಂದ ಇದ್ದರು. ಪತ್ರಕರ್ತರಿಗೆಲ್ಲಾ ಅವರು ಮಾದರಿಯಾಗಿದ್ದರು. ಇವರ ನಿಧನದಿಂದ ಕಲ್ಯಾಣ ಕರ್ನಾಟಕದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here